ಕಲಬುರಗಿಯಲ್ಲಿ ಮನಕಲಕುವ ಘಟನೆ

0
69

ಕಲಬುರಗಿ: ಹದ್ದಾರಿ ರಸ್ತೆಗಳ ಮಧ್ಯದಲ್ಲಿ ಪ್ರಾಣಿಗಳ ಸತ್ತು ಬಿದ್ದುರುವ ಅಸ್ತಿ ಪಂಜರ ದೇಹ ನೋಡಿರುತ್ತೇವೆ. ಅನಾರೋಗ್ಯದಿಂದ ವಯೋದೃದ್ದೆಯೊಬ್ಬಳು ಮೃತಪಟ್ಟ ದೇಹವನ್ನು ನಾಯಿ, ಹಂದಿಗಳು ತಿಂದು ತೇಗಿರುವ ಮನಕುಲಕುವ ಘಟನೆ ಇಲ್ಲಿನ ಅಫಜಲಪೂರ ತಾಲ್ಲೂಕಿನ ಸುಕ್ಷೇತ್ರ ದೇವಲ ಗಾಣಗಾಪುರದ ದೂರದಲ್ಲಿರುವ ದ್ಯಾವಮ್ಮನ ಗುಡಿ ಹತ್ತಿರ ಶನಿವಾರ ಕಂಡುಬಂದಿದೆ.

ನೂರಾರು ಬುದ್ಧಿಮಾಂದ್ಯರು ಸುಕ್ಷೇತ್ರದಲ್ಲಿ ಕಾಣಸಿಗುತ್ತಿದ್ದು, ಸೂಕ್ತ ಆರೈಕೆ ಇಲ್ಲದೇ ನರಳುವಂತಹ ಸ್ಥಿತಿ ಇಲ್ಲಿ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ನೂರಾರು ಭಕ್ತಾದಿಗಳು ನೆರೆಯ ಮಹಾರಾಷ್ಟ್ರದಿಂದ ಆಗಮಿಸುತ್ತಾರೆ. ಮೃತಪಟ್ಟ ವಯೋವೃದ್ಧೆ ಮಹಾರಾಷ್ಟ್ರದ ಮೂಲದವರಾಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ರಾತ್ರಿ ವೇಳೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮೃತ ವಯೋವೃದ್ಧೆಯ ದೇಹವನ್ನು ಬಿಟ್ಟು ಹೋಗಿದ್ದಾರೆ ಎಂದು ಶಂಸಯ ವ್ಯಕ್ತವಾಗಿದೆ. ಈ ದೃಶ್ಯ ಮತ್ತು ಸುದ್ದಿಯನ್ನು ಕೇಳಿದ ಭಕ್ತರು ಹಾಗೂ ಗ್ರಾಮಸ್ಥರು ದೇವಸ್ಥಾನ, ತಾಲ್ಲೂಕಾ ಮತ್ತು ಜಿಲ್ಲಾಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here