ಬಿಸಿ ಬಿಸಿ ಸುದ್ದಿ

ಸಂಗೀತ ಎಲ್ಲಾ ಭಾಷೆ ಸಂಸ್ಕøತಿ ಮೀರಿದ್ದಾಗಿದೆ: ಶಿವಶರಣಯ್ಯ

ಸುರಪುರ: ನಗರದ ಸೂಗುರೇಶ್ವರ ದೇವಸ್ಥಾನದಲ್ಲಿ ವಿಶ್ವ ಸಂಗೀತ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಹಿರಿಯ ಸಂಗೀತ ಕಲಾವಿದ ಶಿವಶರಣಯ್ಯ ಬಳ್ಳುಂಡಗಿಮಠ ಮಾತನಾಡಿ, ಸಂಗೀತವು ಭಾಷೆ ಮತ್ತು ಸಂಸ್ಕøತಿಯನ್ನು ಮೀರಿದ್ದು ಸಂಗೀತವನ್ನು ದೇವರ ಭಾಷೆ ಎಂದು ಕರೆಯಲಾಗುತ್ತದೆ ಸಂಗೀತವನ್ನು ಗಾಂಧರ್ವ ವೇದ ಎನ್ನುತ್ತಾರೆ ಗಂಧರ್ವರ ವಿದ್ಯೆಯಾದುದರಿಂದ ಇದಕ್ಕೆ ಈ ಹೆಸರು ಬಂದಿದೆ ಎಲ್ಲಾ ವಯೋಮಾನದವರನ್ನು ಬಂಧಿಸಿಡುವ ಶಕ್ತಿ ಸಂಗೀತಕ್ಕೆ ಇದೆ ಸಂಗೀತವು ಪ್ರತಿ ಹೃದಯವನ್ನು ಮುಟ್ಟುವ ಅದ್ಭುತ ಕಲೆ ಎಂದರು.

ಸಂಗೀತಕ್ಕೆ ತನ್ನದೇ ಆದ ವಿಶೇಷತೆ ಇದ್ದು ಇಡೀ ವಿಶ್ವದ ಎಲ್ಲಾ ದೇಶಗಳಲ್ಲಿ ಸಂಗೀತ ಕಲೆ ಪ್ರಸಿದ್ಧವಾಗಿದೆ ನಮ್ಮ ದೇಶವು ಸಂಗೀತದ ತವರೂರು ಆಗಿದ್ದು ಹಲವಾರು ಸಂಗೀತದ ಶೈಲಿಗಳನ್ನು ಹೊಂದಿದೆ ಹಿಂದೂಸ್ಥಾನಿ, ಕರ್ನಾಟಕಿ ಸೇರಿದಂತೆ ಅನೇಕ ಪ್ರಕಾರಗಳ ಸಂಗೀತ ವಿಧಗಳಿವೆ ಎಂದು ತಿಳಿಸಿದ ಅವರು ಸಂಗೀತ ಮಾನವ ಸ್ವಭಾವಗಳ ಮೇಲೆ ಸಂಗೀತ ಪ್ರಭಾವ ಬೀರುತ್ತದೆ ಎಂದು ದೃಢಪಟ್ಟಿದೆ ಅನೇಕ ರೋಗಗಳು ಸಂಗೀತದಿಂದ ಗುಣವಾಗುತ್ತದೆ ಎಂದು ಅನೇಕರ ಅನುಭವದಿಂದ ಹೇಳುತ್ತಾರೆ ಸಂಗೀತದ ಮಾಧುರ್ಯವು ಮನುಷ್ಯನಲ್ಲಿರುವ ಸಂಕುತಿತ ಸ್ವಭಾವವನ್ನು ಹೋಗಲಾಡಿಸಿ ಹೃದಯ ವೈಶಾಲ್ಯವನ್ನು ಉಂಟು ಮಾಡುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ನಗರದ ಸಂಗೀತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನೆರವೇರಿತು, ಸಂಗೀತ ಕಲಾವಿದರಾದ ಮೋಹನರಾವ ಮಾಳದಕರ, ಸಿದ್ದಯ್ಯಸ್ವಾಮಿ ಬಳ್ಳುಂಡಗಿಮಠ, ಪ್ರಾಣೇಶರಾವ ಕುಲಕರ್ಣಿ, ರಾಜಶೇಖರ ಗೆಜ್ಜಿ, ಸುರೇಶಬಾಬು ಅಂಬೂರೆ, ಉಮೇಶ ಯಾದವ್, ಮಹಾಂತೇಶ ಶಹಾಪುರಕರ, ಜಗದೀಶ ಮಾನು, ಕು.ದೀಪಿಕಾ, ಕು.ಭೂಮಿಕಾ, ಗುರುನಾಥರೆಡ್ಡಿ ಶೀಲವಂತ, ನೂರುಂದಯ್ಯಸ್ವಾಮಿ, ಶರಣಬಸವ ಕೊಂಗಂಡಿ, ಶ್ರೀಶೈಲ, ಗೌರಿ ಮಾನ್ವಿ, ಶ್ರೀದೇವಿ, ರಮೇಶ ಕುಲಕರ್ಣಿ ಹಾಗೂ ಅನೇಕ ಸಂಗೀತ ಕಲಾವಿದರು ಪಾಲ್ಗೊಂಡಿದ್ದರು.

emedialine

Recent Posts

ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣಗಳ ನಿಷೇಧ

ಬೆಂಗಳೂರು; ಕಬಾಬ್‍ನ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವುದಕ್ಕೆ The Food Safety and Standards Act, 2006  ರ…

2 mins ago

17 ನೂತನ ಶಾಸಕರಿಂದ ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು; ಕರ್ನಾಟಕ ವಿಧಾನಸಭೆಯ ಸದಸ್ಯರಿಂದ ವಿಧಾನಪರಿಷತ್ತಿಗೆ ಆಯ್ಕೆಯಾದ 17 ವಿಧಾನ ಪರಿಷತ್ ಸದಸ್ಯರಾಗಿ  ಪ್ರಮಾಣ ವಚನ ಸ್ವೀಕರಿಸಿದರು. ಭಾರತೀಯ ರಾಷ್ಟ್ರೀಯ…

6 mins ago

ವಿದ್ಯಾರ್ಥಿಗಳಿಗೆ ಕೌಶಲ್ಯದ ಜೊತೆಗೆ ನೈತಿಕ ಮೌಲ್ಯಗಳು ನೀಡುವುದೆ ಜಿಟಿಟಿಸಿ; ಡಾ: ಸುಧಾರಾಣಿ

ಕಲಬುರಗಿ: ವಿದ್ಯಾರ್ಥಿಗಳ ಕಲಿಕೆಯ ಜೊತೆಗೆ ಕೌಶಲ್ಯ ಮತ್ತು ಬದುಕಿಗೆ ನೈತಿಕ ಶಿಕ್ಷಣ ಹಾಗೂ ಮೌಲ್ಯಗಳನ್ನು ನೀಡುವುದೆ ನಮ್ಮ ಸಂಸ್ಥೆಯ ಮುಖ್ಯ…

18 mins ago

ಗ್ಯಾಸ ಸಿಲಿಂಡರ ಸ್ಫೋಟದಲ್ಲಿ ಗಾಯಗೊಂಡ ಕಾರ್ಮಿಕರಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯ

ಕಲಬುರಗಿ:  ನಗರದ ಸಪ್ತಗಿರಿ ಹೊಟೆಲ್‍ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟದಿಂದ ಒಬ್ಬ ಕಾರ್ಮಿಕ ಮೃತಪಟ್ಟಿದ್ದು, ಗಾಯಗೊಂಡಿರುವ ಕಾರ್ಮಿಕರಿಗೆ ಜಿಲ್ಲಾಡಳಿತ, ರಾಜ್ಯ ಸರ್ಕಾರ…

25 mins ago

ಬಡತನದ ನಿವಾರಣೆಗೆ ಪುಸ್ತಕ ಓದಿ

ಕಲಬುರಗಿ: ನಗರದ ಶ್ರೀ ಮತಿ ಕಸ್ತೂರಿಬಾಯಿ ಪಿ ಬುಳ್ಳಾ ಸ್ಮಾರಕ ಭವನದಲ್ಲಿ ಏರ್ಪಡಿಸಿದ್ದ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ…

28 mins ago