ಸುರಪುರ: ಸೂಗುರೇಶ್ವರ ದೇವಸ್ಥಾನದಲ್ಲಿ ಸಂಗೀತ ದರ್ಬಾರ

ಸುರಪುರ: ನಗರದ ಶ್ರೀ ಸೂಗುರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಸಂಗೀತ ದರ್ಬಾರ ಕಾರ್ಯಕ್ರಮ ನಡೆಸಲಾಯಿತು.ಕಾರ್ಯಕ್ರಮ ಉದ್ಘಾಡಿಸಿದ ಸುರಪುರ ಅರಸು ಮನೆತನದ ವಂಶಸ್ಥ ರಾಜಾ ಲಕ್ಷ್ಮೀನಾರಾಯಣ ನಾಯಕ ಮಾತನಾಡಿ, ಸಂಗೀತವನ್ನು ಆಲಿಸುವುದರಿಂದ ಮನಸ್ಸು ಏಕಾಗ್ರತೆ ಹೊಂದುತ್ತದೆ ಸುರಪುರ ಸಂಸ್ಥಾನದ ಪ್ರದೇಶ ಸಂಗೀತ ಕಲೆಗಳ ತವರೂರಾಗಿದೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣಬಸಪ್ಪ ಯಾಳವಾರ ಮಾತನಾಡಿ ಸಪ್ತಸ್ವರಗಳ ಸಂಗೀತಕ್ಕೆ ರೋಗವನ್ನು ಗುಣಪಡಿಸುವ ಸಾಮರ್ಥ್ಯವಿದೆ ಎಂಬುದು ವೈಜ್ಞಾನಿಕ ಸತ್ಯವಾಗಿದೆ. 54 ವರ್ಷಗಳಿಂದ ಸಂಗೀತ ದರ್ಬಾರ ನಡೆಸಿಕೊಂಡು ಬಂದಿರುವುದು ಗಮನಾರ್ಹ ಸಂಗತಿಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಸಿದ್ದ ಪಿ.ಐ. ಕೃಷ್ಣ ಸುಬೇದಾರ ಅವರು ಸಂಗೀತಗಾರರಿಗೆ ಹಿಂದಿನ ಕಾಲದಲ್ಲಿ ರಾಜಶ್ರಯವಿತ್ತು ಇಂದು ಮಠ ಮಂದಿರಗಳು ಕಲಾವಿದರಿಗೆ ಇಂಥ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪ್ರೋತ್ಸಾಹಿಸುತ್ತರುವುದು ಶ್ಲಾಘನೀಯವಾದುದು ಎಂದರು.

ದೂರದರ್ಶನ ಕಲಾವಿದ ಬಸವರಾಜ ಬಂಟನೂರ ರವರು ಮೂರು ರಾಗಗಳಿಂದ ಪ್ರಾರಂಭಗೊಂಡ ಸಂಗೀತವು ಸಪ್ತಸ್ವರಗಳಿಗೆ ಸಾಗಿಬಂದು ಇಂದು ಜನಮಾನಸದಲ್ಲಿ ಉಳಿದಿದೆ ಎಂದರು.

ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಕೊಟ್ರಯ್ಯಸ್ವಾಮಿ ಬಳುಂಡಗಿಮಠ ಸಾನಿದ್ಯ ವಹಿಸಿದ್ದರು. ದೇವಸ್ಥಾನದ ಸ್ಥಾಪಕ ವಂಶಜರಾದ ಸುನೀಲ ಸರಪಟ್ಟಣಶಟ್ಟರು ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ದೂರದರ್ಶನ ಕಲಾವಿದ ಆಮಯ್ಯಸ್ವಾಮಿ ಹಿರೇಮಠ. ಶಿವಶರಣಯ್ಯಸ್ವಾಮಿ ಬಳುಂಡಗಿಮಠ ಉಪಸ್ಥಿತರಿದ್ದರು.

ಕಲಾವಿದರಾದ ನರಸಿಂಹ ಬಂಡಿ. ಪ್ರಾಣೇಶರಾವ ಕುಲಕರ್ಣಿ. ಉಮೇಶ ಯಾದವ. ಶಂಕರ ಆಲಗೂರ. ಮಹಾಂತೇಶ ಶಹಪೂರಕರ ರವರಿಗೆ “ಪ್ರಭುಚನ್ನಕಿರಣ” ಪ್ರಶಸ್ತಿಯನ್ನು ಪ್ರಧಾನಮಾಡಲಾಯಿತು.ಶಿಕ್ಷಕರಾದ ಹೆಚ್.ರಾಠೋಡ ನಿರೂಪಣೆ ಮಾಡಿದರು. ಚಂದ್ರಶೇಖರ್ ಆಜಾದ ಸ್ವಾಗತಿಸಿದರು. ವಕೀಲರಾದ ಮಲ್ಲಿಕಾರ್ಜುನಯ್ಯಸ್ವಾಮಿ ಹಿರೇಮಠ ವಂದಿಸಿದರು.

ಶಿವಶರಣಯ್ಯಸ್ವಾಮಿ ಬಳುಂಡಗಿಮಠ ಮತ್ತು ಈಶ್ವರ ಬಡಿಗೇರ ಪ್ರಾರ್ಥಿಸಿದರು.ಬೆಳಗಿನವರೆಗೆ ಜರುಗಿದ ಸಂಗೀತ ದರ್ಬಾರ ಕಾರ್ಯಕ್ರಮದಲ್ಲಿ ಸಂಗೀತಕಲಾವಿದ ಬಸವರಾಜ ಬಂಟನೂರ ಆಮಯ್ಯಸ್ವಾಮಿ ಹಿರೆಮಠ ರಾಜನಕೋಳೂರ ವಿಠ್ಠಲಸಿಂಗ ಹಜೇರಿ ಮಲ್ಲಯ್ಯಸ್ವಾಮಿ ಕೆಂಭಾವಿ ರವಿಕುಮಾರ ಆಳಂದ ಶಿಲಿಂಗಯ್ಯಸ್ವಾಮಿ ಬಳುಂಡಗಿಮಠ ದಾಸವಾಣಿ ಕಲಾವಿದ ಶರಣಪ್ಪ ಕಮ್ಮಾರ ಮಹೇಶ ಬಂಟನೂರ ನರಸಿಂಹ ಬಂಡಿ ಪ್ರಾಣೇಶರಾವ ಕುಲಕರ್ಣಿ ಹೆಮನೂರಪ್ಪ ಹೆಗ್ಗನದೊಡ್ಡಿ ಮೋಹನರಾವ ಮಾಳದಕರ ಜಗಧೀಶ ಮಾನು ಶಿವಶಂಕರ ಆಲೂರ ಬಂದೇನವಾಜ ಏವೂರ ಮಾರುತಿ ಶಾಂತಪೂರ ಸೋಮನಾಥ ಯಾಳಗಿ ಪದ್ಮಾಕ್ಷಿ ಶಹಪೂರಕರ ಪ್ರಿತಾಂಕಾ ವಿಶ್ವಕರ್ಮ ದೀಪಿಕಾ ಸ್ಥಾವರಮಠ ಭೂಮಿಕಾ ಸ್ಥಾವರಮಠ ಸೂಗಮ್ಮ ಕೊಂಗಂಡಿ ವಿಜಯಲಕ್ಷ್ಮೀ ಯಾದವ. ಸುಮಿತ್ರಾ ಕೆಡಚನವರ. ಅಕ್ಷರಾ ಮಠ. ರವಿಕುಮಾರ ಅಳಂದ ಅನೀಲಸ್ವಾಮಿ ಕೊಟ್ರಯ್ಯಮಠ ಜಗಧೀಶ ಪತ್ತಾರ ರಂಗಂಪೇಠ. ಗುರುನಾಥರಡ್ಡಿ ಶೀಲವಂತ. ಮುಂತಾದ ಕಲಾವಿದರ

ಗೀತಗಾಯನಕ್ಕೆ ಯಮುನೇಶ ಯಾಳಗಿ ಕೆಂಭಾವಿ. ಈಶ್ವರ ಬಡಿಗೇರ ಹುಣಸಗಿ. ರಾಜಶೇಖರ ಗೆಜ್ಜಿ. ಸುರೇಶ ಅಂಬುರೆ. ಉಮೇಶ್ ಯಾದವ. ರಮೇಶ ಕುಲಕರ್ಣಿ. ಲಕ್ಷ್ಮಣ ಆದೋನಿ. ಮಹಾಂತೇಶ ಶಹಪೂರಕರ. ಮನೋಜ ವಿಶ್ವಕರ್ಮ. ರವರು ತಬಲಾ ಸಾಥ್ ನೀಡಿದರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

58 mins ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

4 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

8 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

9 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

11 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

22 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420