ಏಡ್ಸ್ ಪೀಡಿತರನ್ನು ತಾರತಮ್ಯ ಮಾಡಿದಲ್ಲಿ ಕಾನೂನು ರೀತಿ ಅಪರಾಧ

ಸುರಪುರ: ಯಾವುದೋ ಕಾರಣ ದಿಂದ ಹೆಚ್.ಐ.ವಿ ಪೀಡಿತರು ಅಥವಾ ಏಡ್ಸ್ ಪೀಡಿತರನ್ನು ಸಮಾಜದಲ್ಲಿ ತಾರತಮ್ಯ ಭಾವನೆಯಿಂದ ನೋಡುವುದಾಗಲಿ ಅಥವಾ ಅವರಿಗೆ ಅಪಮಾನಿಸುವುದಾಗಲಿ ಮಾಡುವುದು ಕಾನೂನು ರೀತಿ ಅಪರಾಧವಾಗಲಿದೆ,ಅದಕ್ಕೆ 1987ರ ಕಾನೂನಂತೆ ಶಿಕ್ಷೆಯನ್ನು ನೀಡಲಾಗುವುದು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಮಲ್ಲಿಕಾರ್ಜುನ ಈಶ್ವರಪ್ಪ ಕಮತಗಿ ತಿಳಿಸಿದರು.

ನಗರದ ಹಸನಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ತಾಲೂಕು ನ್ಯಾಯವಾದಿಗಳ ಸಂಘ,ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಸಮಾಜದಲ್ಲಿ ಯಾವುದೇ ಏಡ್ಸ್ ಅಥವಾ ಮಾನಸಿಕ ಅಸ್ವಸ್ಥತೆಯಿಂದ ಬಳಲುವಂತವರು ಕಂಡಲ್ಲಿ ಅಂತವರಿಗೆ ಚಿಕಿತ್ಸೆಯನ್ನು ಕೊಡಿಸುವ ಕಾರ್ಯವನ್ನು ನಮ್ಮ ನ್ಯಾಯಾಂಗ ಇಲಾಖೆ ಮಾಡಲಿದೆ ಎಂದರು.

ನ್ಯಾಯಾಧೀಶ ಮಾರುತಿ ಕೆ ಮಾತನಾಡಿ,ಮನುಷ್ಯ ಸಂಗ ಜೀವಿ ಗಂಡಿಗೆ ಹೆಣ್ಣಿನ ಮೇಲೆ ಅಥವಾ ಹೆಣ್ಣಿಗೆ ಗಂಡಿನ ಮೇಲೆ ಮೋಹವಾಗುವುದು ಸಹಜ ಮತ್ತು ಲೈಂಗಿಕತೆ ಎನ್ನುವವುದು ನೈಸರ್ಗಿಕ ಕ್ರೀಯೆಯಾಗಿದ್ದು ಯಾವುದೇ ಕಾರಣಕ್ಕೂ ಅಸುರಕ್ಷಿತ ಲೈಂಗಿಕತೆಯನ್ನು ಅನುಸರಿಸಬಾರದು,ಸುರಕ್ಷಿತ ಲೈಂಗಿಕತೆಗಾಗಿ ಮದುವೆಯಾಗುವುದು ಮುಖ್ಯ ಎಂದು ತಿಳಿಸಿದರು.

ಆಪ್ತ ಸಮಾಲೋಚಕ ಪ್ರದೀಪ ಸೂರ್ಯವಂಶಿ ಮಾತನಾಡಿ,ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 5788 ಪಾಸಿಟಿವ್ ಕೇಸ್ ಇದ್ದು,5400 ಚಿಕಿತ್ಸೆ ಪಡೆಯುತ್ತಿದ್ದಾರೆ, ಈಗ ಯಾದಗಿರಿ ಜಿಲ್ಲೆಯಲ್ಲಿ 299 ಜನ ಗರ್ಭೀಣಿಯರಲ್ಲಿ ಹೆಚ್.ಐ.ವಿ ಪಾಸಿಟಿವ್ ಇದೆ,ಯಾವ ಗರ್ಭೀಣಿ ಅಥವಾ ತಾಯಿ ಚಿಕಿತ್ಸೆ ಪಡೆದಲ್ಲಿ ಮಗುವಿಗೆ ಪಾಸಿಟಿವ್ ಬರುವುದನ್ನು ತಡೆಯಬಹುದು.299 ಜನರಲ್ಲಿ 18 ಮಕ್ಕಳಿಗೆ ಮಾತ್ರ ಹೆಚ್.ಐ.ವಿ ಪಾಸಿಟಿವ್ ಬಂದಿದೆ,ಇನ್ನುಳಿದ ಮಕ್ಕಳಿಗೆ ಯಾವುದೇ ಸೊಂಕು ಇಲ್ಲ ಎಂದರು.2021-22ರಲ್ಲಿ ನಮ್ಮ ಯಾದಗಿರಿ ಜಿಲ್ಲೆಯಲ್ಲಿ 199 ಹೆಚ್.ಐ.ವಿ ಪಾಸಿಟಿವ್ ಕೇಸ್ ಕಂಡುಬಂದಿವೆ, ನವೆಂಬರ್ ತಿಂಗಳಲ್ಲಿ ನಮ್ಮ ತಾಲೂಕಿನಲ್ಲಿ ಎರಡು ಹಾಗೂ ಹುಣಸಗಿ ತಾಲೂಕಿನಲ್ಲಿ ಮೂರು ಜನರದಲ್ಲಿ ಹೆಚ್.ವಿ ಸೊಂಕು ಪತ್ತೆಯಾಗಿದೆ ಎಂದು ತಿಳಿಸಿದರು.ಹೆಚ್.ವಿ ಪೀಡಿತರಿಗೆ ಸರಕಾರ ದಿಂದ ಉಚಿತ ಚಿಕಿತ್ಸೆ,ಅವರಿಗೆ ರೇಷನ್ ಕಾರ್ಡ್,ವಸತಿ ಸೌಲಭ್ಯ ಕೊಡಿಸುವುದು ಮತ್ತು ಹೆಚ್.ಐ.ವಿ ಪೀಡಿತರ ಮಕ್ಕಳಿಗೆ 18 ವರ್ಷದ ವರೆಗೂ ತಿಂಗಳಿಗೆ 1ಸಾವಿರ ರೂಪಾಯಿಗಳ ಧನ ಸಹಾಯ ಮಾಡಲಾಗುತ್ತಿದೆ ಎಂದು ತಿಳಿಸಿದರು.

ನಂತರ ಕಾರ್ಯಕ್ರಮದ ಕುರಿತು ಅಧ್ಯಕ್ಷತೆ ವಹಿಸಿದ್ದ ಡಾ:ಅಲ್ಲಾವುದ್ದಿನ್ ಅರಕೇರಿ ಹಾಗೂ ನ್ಯಾಯವಾದಿ ಆದಪ್ಪ ಹೊಸ್ಮನಿ ಮಾತನಾಡಿದರು.ಕಾರ್ಯಕ್ರಮದ ವೇದಿಕೆ ಮೇಲೆ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಬಸವರಾಜ,ಸಹಾಯಕ ಸರಕಾರಿ ಅಭಿಯೋಜಕ ಮರೇಪ್ಪ ಹೊಸಮನಿ,ನಗರಸಭೆ ಸದಸ್ಯೆ ಸುವರ್ಣ ಸಿದ್ರಾಮ ಎಲಿಗಾರ,ಆಯುಷ್ ವೈದ್ಯ ಡಾ:ಇಮ್ತಿಯಾಜ್ ವಕೀಲರ ಸಂಘದ ಉಪಾಧ್ಯಕ್ಷ ಮಾನಪ್ಪ ಕವಡಿಮಟ್ಟಿ ವೇದಿಕೆಯಲ್ಲಿದ್ದರು.ವಕೀಲ ಆದಪ್ಪ ಹೊಸ್ಮನಿ ಕಾರ್ಯಕ್ರಮ ನಿರೂಪಿಸಿದರು,ವಕೀಲ ನಾಗಪ್ಪ ಚವಲಕರ್ ವಂದಿಸಿದರು.ಕಾರ್ಯಕ್ರಮದಲ್ಲಿ ನ್ಯಾಯಾಂಗ ಇಲಾಖೆಯ ಭೀಮು ಬನಸೋಡೆ ಸೇರಿದಂತೆ ಅನೇಕ ಜನ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

3 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

6 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

11 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

11 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

13 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420