ಕಲಬುರಗಿ: ಕೇಂದ್ರ ಕಾರಾಗೃಹದಲ್ಲಿ  “ಕ್ರಿಸ್ಮಸ್ ಸೌಹಾರ್ದ ಕೂಟ”

ಕಲಬುರಗಿ: ಗುಲ್ಬರ್ಗಾ ಡೈಯೋಸನ್ ಪ್ರಿಸನ್ ಮಿನಿಸ್ಟರಿ, ಕಲಬುರಗಿ ಹಾಗೂ ಕೇಂದ್ರ ಕಾರಾಗೃಹ ಕಲಬುರಗಿರವರ ಸಂಯುಕ್ತಾಶ್ರಯದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ “ಕ್ರಿಸ್ಮಸ್ ಸೌಹಾರ್ದ ಕೂಟ” ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಪೂಜ್ಯ ಧರ್ಮಾಧ್ಯಕ್ಷರು ಮೈಕಲ್ ಮಿರಾಂದರವರು ಶಾಂತಿಯ ಪ್ರತಿ ರೂಪವಾದ ಪ್ರಜ್ವಲ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಈ ಲೋಕದಲ್ಲಿ ಎಲ್ಲರೂ ತಾತ್ಕಾಲಿಕ, ಯಾರೂ ಶಾಶ್ವತವಲ್ಲ, ಹಾಗಾಗಿ ಎಲ್ಲಕ್ಕಿಂತ ಮಿಗಿಲಾಗಿ ಬಂಧನವೆಂದರೆ ದುರಾಸೆಯಿಂದ ಮುಕ್ತಿಯನ್ನು ಪಡೆಯುವುದು. ಮನುಕುಲದ ಉದ್ಧಾರಕ್ಕಾಗಿ ಹುಟ್ಟಿಬಂದ ಏಸು ಪ್ರತಿಯೊಬ್ಬರಲ್ಲಿ ಪಶ್ಚಾತಾಪ ಭಾವನೆ ಬಂದಾಗ ಮಾತ್ರ ನಿಜವಾದ ಮನಸ್ಸಿನ ಬದಲಾವಣೆ ಆಗುತ್ತದೆ. ಇದಕ್ಕಾಗಿ ತಾವುಗಳು ನಿತ್ಯ ಪ್ರಾರ್ಥನೆ, ಧ್ಯಾನವನ್ನು ಮಾಡಿ ಮನಃ ಪರಿವರ್ತನೆಗೊಂಡು ಬಿಡುಗಡೆ ಆಗಬೇಕೆಂದು ಹೇಳಿದರು.

ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದಬಿ.ಎಮ್.ಕೊಟ್ರೇಶ್, ಅಧೀಕ್ಷಕರು, ಕೇಂದ್ರ ಕಾರಾಗೃಹ ಕಲಬುರಗಿರವರು ಮಾತನಾಡುತ್ತಾ, ಮೊದಲಿಗೆ ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯವನ್ನು ಕೋರಿದರು. ನಾವು ಕಾರಾಗೃಹದಲ್ಲಿರುವ ಬಂದಿ ನಿವಾಸಿಗಳ ಮನಃ ಪರಿವರ್ತನೆಗಾಗಿ ಹಲವಾರು ಕಾರ್ಯಕ್ರಮಗಳಿಗೆ ಮುಕ್ತವಾದ ಅವಕಾಶವನ್ನು ನೀಡಲಾಗುತ್ತದೆ. ಏಕೆಂದರೆ ಬಂದಿ ನಿವಾಸಿಗಳು ತಮ್ಮ ಮನಃ ಪರಿವರ್ತನೆಗೊಳಿಸಿಕೊಂಡು ಇಲ್ಲಿರುವ ತನಕ ಒಳ್ಳೆಯ ನಡತೆಯನ್ನು ಬೆಳೆಸಿಕೊಂಡು ಕಾರಾಗೃಹದಲ್ಲಿರುವ ವಿವಿಧ ಕೌಶಲ್ಯ ಯೋಜನೆಗಳಲ್ಲಿ ಭಾಗವಹಿಸಿ ಕೌಶಲ್ಯತೆಗಳನ್ನು ಕಲಿತು ಉತ್ತಮ ವ್ಯಕ್ತಿಯಾಗಿ ಮನಃ ಪರಿವರ್ತನೆ ಮಾಡಿಕೊಂಡವರಿಗೆ ನಾವುಗಳು ಬಿಡುಗಡೆಗೆ ಶಿಫಾರಸ್ಸುಗಳನ್ನು ಮಾಡಲಾಗುತ್ತದೆ. ಅದು ಅಲ್ಲದೇ ಪ್ರತಿ ದಿನ ಪ್ರಾರ್ಥನೆ ಧ್ಯಾನವನ್ನು ಮಾಡಲಿಕ್ಕೆ ಬೇಕಾಗುವ ಸ್ಥಳಾವಕಾಶವನ್ನು ನಾವುಗಳು ನೀಡಲಿಕ್ಕೆ ಸದಾ ಸಿದ್ಧ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿಹುಸಾನಿ ಪೀರ್, ಸಹಾಯಕ ಅಧಿಕ್ಷಕರು, ಕೇಂದ್ರ ಕಾರಾಗೃಹ ಕಲಬುರಗಿ, ವೈದ್ಯಾಧಿಕಾರಿಗಳಾದ ಡಾ. ರವೀಂದ್ರ ಬನ್ನೇರಾ, ಡಾ. ಬಸವರಾಜ ಕಿರಣಗಿ, ಕೇಂದ್ರ ಕಾರಾಗೃಹ ಕಲಬುರಗಿ,ನಾಗರಾಜ ಮುಲಗೆ, ಶಿಕ್ಷಕರು, ಜೈಲರ್‍ಗಳಾದಅಶೊಕ ಹೊಸಮನಿ,ಅರ್ಜುಸಿಂಗ್ ಚೌವಾಣ ಹಾಗೂ ಗುಲ್ಬರ್ಗಾ ಡೈಯೋಸನ್ ಪ್ರಿಸನ್ ಮಿನಿಸ್ಟರಿ, ಕಲಬುರಗಿಯ ಸಿಸ್ಟರ್ಸ್ ಮತ್ತು ಕಾರಾಗೃಹದ ಇತರೇ ಎಲ್ಲಾ ಅಧಿಕಾರಿ /ಸಿಬ್ಬಂದಿವರ್ಗದವರು ಭಾಗವಹಿಸಿದ್ದರು. ಪ್ರಾರ್ಥನಾ ಗೀತೆಯನ್ನು ಡೇವಿಡ್ ಫಾದರ-ರವರು ನಡೆಸಿಕೊಟ್ಟರು. ಸ್ವಾಗತ ಮತ್ತು ನಿರೂಪಣೆಯನ್ನು ಶ್ರಿ ಆನಂದರಾಜ ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಎಲ್ಲಾ ಬಂದಿಗಳಿಗೆ ಸಿಹಿ ತಿಂಡಿಗಳು ಮತ್ತು ಕೇಕ್‍ಗಳನ್ನು ವಿತರಿಸಲಾಯಿತು. ವಂದನಾಪರ್ಣೆಯನ್ನು ಸಿಸ್ಟರ್ ವಸಂತಾ ನಡೆಸಿಕೊಟ್ಟರು. ಅಂತಿಮವಾಗಿ ಸಾಂತಾ ಕ್ಲೋಸ್ ನಿಂದ ಕ್ರಿಸ್ಮಸ್ ಶುಭಾಶಯಗಳು ತಿಳಿಸಲಾಯಿತು. ಕೊನೆಯಲ್ಲಿ ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

emedialine

Recent Posts

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

4 mins ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

11 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

14 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

14 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

14 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

14 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420