ಸುರಪುರ: ದಾಸವೇರಣ್ಯ ಪುರಂದರದಾಸರ ಆರಾಧನೆಯ ಪ್ರಯುಕ್ತ ಶ್ರೀ ಕಾತ್ಯಾಯನಿ ಮಹಿಳಾ ಭಜನಾ ಮಂಡಳಿ ವತಿಯಿಂದ ಶನಿವಾರದಂದು ಪ್ರಮುಖ ಬೀದಿಗಳ ಮೂಲಕ ನಗರ ಸಂಕೀರ್ತನೆ ನಡೆಸಲಾಯಿತು.
ಪುರಂದರದಾಸರ ವೇಷ ಧರಿಸಿದ್ದ ಬಾಲಕ ಶ್ರೀವತ್ಸ ಹಾಗೂ ಮಹಿಳೆಯರು ಕೋಲಾಟ ಆಡುವ ಮೂಲಕ ಪುರಂದರದಾಸರ ವಿರಚಿತ ಹಾಡುಗಳನ್ನು ಹಾಡಿದರು, ನಂತರ ಮಧ್ವ ಮಂಟಪದಲ್ಲಿ ಆಚರಣೆ ಕಾರ್ಯಕ್ರಮದಲ್ಲಿ ಪುರಂದರದಾಸರ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು ಭೀಮಶೇನಾಚಾರ್ಯ ಜೋಷಿ ಮಂಗಳೂರು ಮಾತನಾಡಿ ನಾರದರೇ ಸ್ವಯಂ ಪುರಂದರದಾಸರಾಗಿ ಅವತರಿಸಿದ್ದು ದಾಸಶ್ರೇಷ್ಠರಾದ ಪುರಂದರದಾಸರು ಕರ್ನಾಟಕ ಸಂಗೀತಕ್ಕೆ ನೀಡಿದ ಕೊಡುಗೆ ಅಪಾರ ಸಂಗೀತ ಪಿತಾಮಹ ಎನ್ನಿಸಿಕೊಂಡಿದ್ದಾರೆ ಎಂದು ಹೇಳಿದರು.
ಭಜನಾ ಮಂಡಳಿಯ ರಾಜಲಕ್ಷ್ಮೀ ಕುಲಕರ್ಣಿ, ನಂದಾ, ರಾಧಾ ದೇವಡಿ, ಕುಸುಮಾ, ವೈಶಾಲಿ, ರೂಪಾ, ಸುರೇಖಾ ಜೋಷಿ, ವಾಣಿ ಕುಲಕರ್ಣಿ, ಅನುಸೂಯಾ, ಗೀತಾಬಾಯಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಗುರುರಾಜ ಭಜನಾ ಮಂಡಳಿ : ನಗರದ ರಾಘವೇಂದ್ರಸ್ವಾಮಿ ಮಠದಲ್ಲಿ ಗುರುರಾಜ ಭಜನಾ ಮಂಡಳಿ ವತಿಯಿಂದ ದಾಸಶ್ರೇಷ್ಟ ಪುರಂದರದಾಸರ ಆರಾಧನೆಯನ್ನು ಆಚರಿಸಲಾಯಿತು, ಪುರಂದರದಾಸರ ವೇಷ ಧರಿಸಿದ್ದ ಗುರುರಾಜಾಚಾರ್ಯ ಪಾಲ್ಮೂರುರವರ ನೇತೃತ್ವದಲ್ಲಿ ಗೋಪಾಲ ಬೇಡುವ ಕಾರ್ಯಕ್ರಮ ನಡೆಯಿತು ವ್ಯಾಸ ಮಂದಿರದಲ್ಲಿ ಪುರಂದರದಾಸರ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು ನಂತರ ತೀರ್ಥ ಪ್ರಸಾದ ಜರುಗಿತು. ಅರ್ಚಕರಾದ ವಾದಿರಾಜ ಬೂದುರು, ನರಸಿಂಹರಾವ ಕುಲಕರ್ಣಿ ಬಾಡಿಯಾಲ, ಮಧುಸೂಧನ ಡಬೀರ, ನರಸಿಂಹರಾವ ಬಡಶೇಷಿ, ನರಸಿಂಹ ಭಂಡಿ ಇತರರಿದ್ದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…