ಶರಣ ಧರ್ಮ ಇತರ ಧರ್ಮಗಳಿಗಿಂತ ಭಿನ್ನ

0
35

ಕಲಬುರಗಿ: ತನ್ನನ್ನು ತಾನು ಪರಿಶುದ್ಧ ಮಾಡಿಕೊಳ್ಳುವ ಧಾರ್ಮಿಕ ತಾತ್ವಕತೆ ಹೊಂದಿರುವ ಶರಣ ಧರ್ಮ ಇತರ ಧರ್ಮಗಳಿಗಿಂತ ಭಿನ್ನವಾಗಿ ಬೆಳೆದು ಬಂದಿದೆ ಎಂದು ಶರಣ ಸಾಹಿತಿ ಡಾ. ಸೋಮನಾಥ ಯಾಳವಾರ ತಿಳಿಸಿದರು.

ನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಲಿಂ. ಜಗದೇವಪ್ಪ ರೇವಪ್ದಪ ಮೋತಕಪಳ್ಳಿ ಸ್ಮರಣಾರ್ಥ 739ನೇ ಅರಿವಿನ ಮನೆ ಕಾರ್ಯಕ್ರಮದಲ್ಲಿ “ಶರಣ ಸಂಸ್ಕøತಿ-ತಾತ್ವಿಕ ನಿಲುವುಗಳು” ವಿಷಯ ಕುರಿತು ಅನುಭಾವ ನೀಡಿದ ಅವರು, ಶರಣ ಸಂಸ್ಕøತಿಯನ್ನು ಪರಿಶೀಲನೆ ಮಾಡುವಾಗ ಬಸವÀ ಧರ್ಮ ಸಾಮಾನ್ಯ ಧರ್ಮವಲ್ಲ. ವೈಚಾರಿಕ ವೈಜ್ಞಾನಿಕ ಅಂಶಗಳಿರುವುದಲ್ಲದೆ ಮಾನವೀಯ ನೆಲೆಯಲ್ಲಿ ರೂಪುಗೊಂಡ ಧರ್ಮ ಎಂಬುದು ಅರಿವಿಗೆ ಬರುತ್ತದೆ ಎಂದು ತಿಳಿಸಿದರು.

Contact Your\'s Advertisement; 9902492681

ಯಾರು ತನಗಿಂತ ದೊಡ್ಡ ಶಕ್ತಿಯಿದೆ ಎಂದು ತಿಳಿದು ತನ್ನನ್ನು ತಾನು ಸಮರ್ಪಿಸಿಕೊಳ್ಳುವುದೇ ಮಾನವ ಸಂಸ್ಕøತಿಯ ಜೀವಾಳ. ಇಂತಹ ಲೋಕಹಿತ ಬಯಸುವ ನೆಲೆಯಲ್ಲಿ ಬದುಕಿದ ಶರಣರು ಅದೇ ನೆಲೆಯಲ್ಲಿ ಬದುಕುವಂತೆ ಬೋಧಿಸಿದರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹಣಮಂತರಾವ ಮೋತಕಪಳ್ಳಿ ಮಾತನಾಡಿ, ಕಾಯಕ-ದಾಸೋಹದ ತಳಹದಿಯಲ್ಲಿ ಬೆಳೆದು ನಿಂತಿರುವ ಲಿಂಗಾಯತ ಧರ್ಮ ಮನುಷ್ಯನನ್ನು ಆತ್ಮೋನ್ನತಿಯ ಕಡೆಗೆ ಕರೆದೊಯುತ್ತದೆ ಎಂದು ವಿವರಿಸಿದರು.

ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ, ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಹಾಗೂ ಸಂಶೋಧನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ದಂಡೆ ವೇದಿಕೆಯಲ್ಲಿದ್ದರು. ದತ್ತಿ ದಾಸೋಹಿ ಕಾಶಿನಾಥ ಮೋತಕಪಳ್ಳಿ ಸ್ವಾಗತಿಸಿದರು. ಎಚ್.ಕೆ. ಉದ್ದಂಡಯ್ಯ ನಿರೂಪಿಸಿ ವಂದಿಸಿದರು.

ಜೀವ ಕಾರಣ್ಯ ಹೊಂದಿರುವ ಶರಣ ಸಂಸ್ಕøತಿಯ ತಾತ್ವಿಕತೆಯನ್ನು ಗಮನಿಸುವಾಗ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸೇರಿದಂತೆ ಅನೇಕ ತಾತ್ವಿಕ ಚಿಂತನೆಗಳು ಗೋಚರವಾಗುತ್ತವೆ. ಆತ್ಮ-ಪರಮಾತ್ಮವಾಗಿ ಬೆಳೆಯುವ ಅಪೂರ್ವ ಸಾಧನಾ ಕ್ರಮ ಇದಾಗಿದೆ. -ಡಾ. ಸೋಮನಾಥ ಯಾಳವಾರ, ಹುಮನಾಬಾದ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here