ಜಯಂತ್ಯುತ್ಸವ ಸಮಿತಿ ಸಭೆ 12ಕ್ಕೆ

0
20

ಕಲಬುರಗಿ: ಜಿಲ್ಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತ್ಯುತ್ಸವ ಅಧ್ಯಕ್ಷರ ನೇಮಕ ಹಾಗೂ ಸಮಿತಿ ರಚನೆ ಸಂಬಂಧ ಮಾ.12 ರಂದು ಬೆಳಗ್ಗೆ 11ಕ್ಕೆ ನಗರದ ಐವಾನ್ ಶಾಹಿಯ ಹೊಸ ಅತಿಥಿಗೃಹದಲ್ಲಿ ಸಭೆ ಕರೆಯಲಾಗಿದೆ ಎಂದು 131 ನೇ ಜಯಂತ್ಯುತ್ಸವ ಅಧ್ಯಕ್ಷ ಶ್ರೀನಿವಾಸ ಅಶೋಕ ಲಾಖೆ ಹಾಗೂ ಹಿರಿಯ ದಲಿತ ಮುಖಂಡ ವಿಠಲ ದೊಡ್ಡನಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಡಾ.ಬಿ.ಆ ರ್.ಅಂಬೇಡ್ಕರ್ ಅವರ 132 ನೇ ಜಯಂತ್ಯುತ್ಸವ ಅಧ್ಯಕ್ಷರ ಆಯ್ಕೆ ಹಾಗೂ ಸಮಿತಿ ರಚನೆ ಕುರಿತು ಅಂದು ನಡೆಯಲಿರುವ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ. ಸಭೆಗೆ ಎಲ್ಲ ಚಿಂತಕರು,ಬುದ್ಧಿಜೀವಿಗಳು, ಅಂಬೇಡ್ಕರ್ ಅನುಯಾಯಿಗಳು ಪಾಲ್ಗೊಳ್ಳಬೇಕು ಎಂದು ಕೋರಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here