ಕಲಬುರಗಿ: ಸುಳ್ಳು ಪ್ರಕರಣಗಳನ್ನು ರದ್ದು ಪಡೆಸಿವಂತೆ ಸುಳ್ಳು ಪ್ರಕರಣಗಳು ದಾಖಲಿಸಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕಡಗಂಚಿ ಕೇಂದ್ರ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ ಓರ್ವವರು ವಿಶ್ವ ವಿದ್ಯಾಲಯದ ಆಡಳಿತ ಸೌಧದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾಧಿ ಉಪವಾಸ ಸತ್ಯಾಗ್ರಹಕ್ಕೆ ಕೆಪಿಆರ್ಎಸ್ ಸಂಘಟನೆ ಮುಖಂಡರು ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ.
ಎಂಬಿ ಸಜ್ಜನ್, ಶರಣಬಸಪ್ಪ ಮಮಶೇಟಿ, ಶಂಕ್ರಯ್ಯ ಘಂಟಿ, ನಾಗಯ್ಯಾ ಸ್ವಾಮಿ, ರಾಯ್ಯಪ್ಪ ಒಳಗೊಂಡ ನಿಯೋಗ ಸತ್ಯಗ್ರಹ ನಿರತ ವಿದ್ಯಾರ್ಥಿ ನಂದಪ್ಪ ಅವರಿಗೆ ಭೇಟಿ ನೀಡಿದ ಅವರು ಸಿಯುಕೆ ವಿಧ್ಯಾರ್ಥಿಗಳ ನೆರವಿಗೆ ಅಧಿಕಾರಿಗಳು ಬರಬೇಕೆಂದು ಒತ್ತಾಯಿಸಿದರು.
ನಂದಪ್ಪ ಅವರ ನ್ಯಾಯಯುತ ಬೇಡಿಕೆ ಈಡೇರಿಕೆ ಈಡೇರಿಸುವಲ್ಲಿ ನಿರ್ಲಕ್ಷ ತೋರಿದಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಈ ವೇಳೆ ಸಿಯುಕೆಯ ಕುಲಪತಿಗಳು ಮತ್ತು ಅಧಿಕಾರಿಗಳಿಗೆ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ನಂದಪ್ಪ ಅವರ ಸತ್ಯಾಗ್ರಹ 3 ನೇ ದಿನಕ್ಕೆ ಕಾಲಿಟ್ಟಿದೆ.