ಜೇವರ್ಗಿ: ರಾಹುಲ್ ಗಾಂಧಿ ಸಮಾವೇಶಕ್ಕೆ ಮಳೆ ಅಡ್ಡಿ: ಗುಡುಗು ಮಳೆಯಲ್ಲಿ ಕಾದು ನಿಂತ ಜನ

0
69

ಕಲಬುರಗಿ: ಜಿಲ್ಲೆಯ ಜೇರ್ವಗಿ ಪಟ್ಟಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಕಾಂಗ್ರೆಸ್ ಬೃಹತ್ ಸಮಾವೇಶದ ಆರಂಭದಲ್ಲೆ ಭಾರಿ ಮಳೆ ಅಡ್ಡಿಯಾಗಿದೆ.ಗುಡುಗು ಸಿಡಿಲಿನ ಆರ್ಭಟದ ಮಧ್ಯೆಯೂ ಜನ ರಾಹುಲ್ ಗಾಗಿ ಕಾದು ನಿಂತಿದ್ದಾರೆ.

ಹವಾಮಾನ ವೈಪರೀತ್ಯ ದಿಂದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬೆಳಗ್ಗೆ ನಿಗಧಿತ ಸಮಯದಲ್ಲಿ ಕಾರ್ಯಕ್ರಮ ಸ್ಥಳಕ್ಕೆ ಬರಲಾಗಲಿಲ್ಲ. ಮಂಗಳೂರಿನಿಂದ ಬೆಳಗ್ಗೆ ೧೨ ಗಂಟೆಗೆ ವಮಾನದ ಮುಖೇನ ಕಲಬುರಗಿ ವೇಳೆ ಮಾನ ನಿಲ್ದಾಣಕ್ಕೆ ಆಗಮಿಸಿದರು.

Contact Your\'s Advertisement; 9902492681

ಆದರೆ ಅಲ್ಲಿಂದ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಜೇವರ್ಗಿ ಬರಬೇಕೆಂದರೆ ಮೋಡ ಕವಿದು ಸಾಧ್ಯವಾಗಲಿಲ್ಲಿ. ಇದೇ ವೇಳೆ ಜೇವರ್ಗಿ ಯಲ್ಲಿ ಭಾರಿ ಮಳೆ ಬೀಳಲಾರಂಭಿಸಿದೆ. ಪ್ರಯುಕ್ತ ಅವರನ್ನು ರಸ್ತೆ ಮೂಲಕ ಕರೆ ತರಯವ ಯತ್ನ ನಡೆದಿದೆ.

ಕಾಂಗ್ರಸ್ ಯುವರಾಜನ ನೋಡಲು ಜನರು ಜಡಿವ ಮಳೆ ಮಧ್ಯೆ ಕಾತುರದಿಂದ ಕಾಯುತ್ತಿದ್ದರೆ. ಈ ಸುರಿವ ಮಳೆಯಲ್ಲಿ ಕಾಯುತ್ತಿರುವ ಜನರನ್ನು ಉದ್ದೇಶಿಸಿ ಮಾತನಾಡಿದ ಅಭ್ಯರ್ಥಿ ಡಾ.ಅಜಯಸಿಂಗ್ ಮಾತನಾಡಿ ಮಳೆ ಒಳ್ಳೆಯ ಸಂಕೇತ. ರೈತರಿಗೆ ಸುಭ ಸೂಚನೆ.

ಇದರೊಂದಿಗೆ ರಾಜ್ಯವನ್ನಾಳಿದ ಭ್ರಷ್ಟ ಸರಕಾರವನ್ನು ಕಿತ್ತೊಗೆಯಲು ವೇದಿಕೆಯೂ ಆಗಲಿದೆ. ಇದೇ ವೇಳೆ ಬಿ.ಆರ್.ಪಾಟೀಲ, ಡಾ.ಶರಣಪ್ರಕಾಶ ಪಾಟೀಳ, ಕನೀಜ್ ಫಾತಿಮಾ, ಎಂ.ವೈ.ಪಾಟೀಲ, ಸುಭಾಷ್ ರಾಠೋಡ್, ತಿಪ್ಪಣ್ಣಪ್ಪ ಕಮಕನೂರು ಮಾತನಾಡಿದರು. ಗುಡುಗು ಸಹಿತ ಭಾರಿ ಮಳೆ ಬೀಳುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here