ಕಲಬುರಗಿ ದಕ್ಷಿಣದಲ್ಲಿ ಬಿಜೆಪಿ ಪರ ಹಣ ಹಂಚಿಕೆ ಆರೋಪ; ಇಬ್ಬರನ್ನು ಬೆನ್ನಟ್ಟಿ ಹಿಡಿದ ಜಿಲ್ಲಾಧಿಕಾರಿ | ಪ್ರಕರಣ ದಾಖಲು

0
46

ಕಲಬುರಗಿ; ಸೋಮವಾರ ರಾತ್ರಿಯ ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ನೀತಿ ಸಂಹಿತೆ ಉಲ್ಲಂಘಿಸಿ ಮಧ್ಯ ಮತ್ತು ಹಣ ವಿತರಣೆ ಮಾಡುತ್ತಿರುವ ಬಿಜೆಪಿ ಕಾರ್ಯಕರ್ತರಿಬ್ಬರನ್ನು ಜಿಲ್ಲಾಧಿಕಾರಿ ಯಶವಂತ ವಿ ಗುರುಕರ್ ಅವರಿಗೆ ಬೆನ್ನಟ್ಟಿ ಹಿಡುವ ಮೂಲಕ ಆಕ್ರಮ ಚುನಾವಣೆ ನಡೆಸುವರಿಗೆ ಶಾಕ್ ನೀಡಿದ್ದಾರೆ.

ನಗರದ ಸಂಗಮೇಶ್ವರ ಬಡಾವಣೆ ಹತ್ತಿರ ಅಕ್ರಮವಾಗಿ ಚುನಾವಣ ನೀತಿ ಸಂಹಿತೆ ಉಲ್ಲಂಘಿಸಿ ಮಧ್ಯ ಮತ್ತು ಹಣ ವಿತರಣೆಯಾಗುತ್ತಿರುವ ಕುರಿತು ದೂರು ಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಯಶವಂತ ವಿ ಗುರುಕರ್ ಅವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿದರು.

Contact Your\'s Advertisement; 9902492681

ಸ್ಥಳದಲ್ಲಿ ಮೂರು ಜನ ಸವಾರರನ್ನು ಹೊಂದಿದ ವಾಹನವೊಂದು (ಬಿಳಿ ಬಣ್ಣದ ಇನ್ನೋವಾ ಕ್ರಿಸ್ಟಾ ವಾಹನ) ಇರುವುದು ಕಂಡುಬಂದಿರುತ್ತದೆ. ವಿಚಾರಿಸಲು ಮುಂದಾದಾಗ ವಾಹನವು ಅತೀ ವೇಗದಲ್ಲಿ ಸ್ಥಳದಿ೦ದ ನಿರ್ಗಮಿಸಿತ್ತು. ಅದರಂತೆ ಸದರಿವಾಹವನ್ನು ಹಿಂಬಾಲಿಸಿ ವಿದ್ಯಾನಗರದ ಹನುಮಾನ ದೇವಸ್ಥಾನದ ಹತ್ತಿರ ತಡೆಗಟ್ಟದಾಗ ವಾಹದಲ್ಲಿದ್ದ ಒಬ್ಬ ವ್ಯಕ್ತಿಯು ಸ್ಥಳದಿ೦ದ ಕೂಡಲೇ ಒಂದು ಬ್ಯಾಗನೊಂದಿಗೆ ಒಡಿಹೋಗಿರುತ್ತಾನೆ ಮತ್ತು ಉಳಿದ ಇನ್ನಿಬ್ಬರನ್ನು ಕಛೇರಿ ವಾಹನ ಚಾಲಕರು ಮತ್ತು ಸಿಬ್ಬಂದಿ ಕೂಡಿಕೊಂಡು ತಡೆಹಿಡಿದು ಪ್ರಶ್ನಿಸಲಾಯಿತು ಎಂದು ಜಿಲ್ಲಾಧಿಕಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಂತರ ಪೋಲಿಸ ಆಯುಕ್ತರು. ನಗರ ಹಾಗೂ ಸಿಟಿ ಪೊಲೀಸ್ ಕಂಟ್ರೋಲ್ ರೂಮ ಇವರ ಗಮನಕ್ಕೆ ತರಲಾಯಿತು. ಆದ ಕಾರಣ ಸದರಿ ಘಟನೆಯ ಕುರಿತು ಐಪಿಸಿ u/s 171 , H 321, 353 ರಡಿ ಹಾಗೂ ಅನ್ವಯಿಸುವ ಸೂಕ್ತ ಕಾನೂನಿನಡಿ ಪ್ರಕರಣವನ್ನು ದಾಖಲಿಸಿಕೊಂಡು ಘಟನೆ ವೇಳೆಯಲ್ಲಿ ಪಲಾಯನಗೈದ ವ್ಯಕ್ತಿಯ ಕುರಿತು ಹಾಗೂ ಯಾವ ಕೃತ್ಯ ಪ್ರಸ್ತಾಪಿಸಿದ ಸ್ಥಳದಲ್ಲಿ ಜರುಗಿದೆ ಎನ್ನುವ ಕುರಿತು ವಿಚಾರಣೆ ಜರುಗಿಸಲು ಪೊಲೀಸ್ ಆಯುಕ್ತರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here