ಶಹಾಪುರ: ಸರಕಾರಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಶಾಪೂರ ತಾಲ್ಲೂಕಿನ ಹತ್ತಿಗೂಡೂರ ಕೆ.ಇ.ಬಿ ಹತ್ತಿರ ಸಾಯ೦ಕಾಲ 4 ಗಂಟೆಯ ಸುಮಾರಿಗೆ ಜರುಗಿದೆ.
ಹೊಸಪೇಟೆಯಿಂದ ಬೀದರಿಗೆ ಹೋಗುತ್ತಿರುವಾಗ ಎದುರುಗಡೆ ಬಂದ ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರರಿಬ್ಬರಿಗೆ ಗಂಭೀರವಾದ ಗಾಯಗಳಾಗಿವೆ.
ಇಬ್ಬರು ಪ್ರಯಾಣಿಕರು ಹತ್ತಿಗುಡೂರು ಗ್ರಾಮದ ನಿವಾಸಿ ಎಂದು ತಿಳಿದುಬಂದಿದ್ದು, ಕೂಡಲೇ ಅವರನ್ನು ಶಹಾಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.