ಕಲಬುರಗಿ: ನಗರದ ವಾರ್ಡ ನಂ. 43 ರಲ್ಲಿ ಬರುವ ಕ್ಯಾಂಪ್ಬೆಲ್ಸ್ ಶಾಲೆಯ ಮುಂಭಾಗದಲ್ಲಿ ಮಳೆ ನೀರು ರಸ್ತೆಯ ಮೇಲೆ ನಿಂತು ಮಕ್ಕಳು ಶಾಲೆಗೆ ಹೋಗಿ ಬರಲು ತೊಂದರೆಯಾಗುತ್ತಿದೆ. ದಿನಾಂಕ 09/06/2022 ರಂದು ಮಾನ್ಯ ಆಯುಕ್ತರು ಮಹನಾಗರ ಪಾಲಿಕೆ ಅವರಿಗೆ ಅರ್ಜಿ ಸಲ್ಲಿಸಲಾಗಿತ್ತು.
ಹಲವಾರು ಬಾರಿ ಈ ಅರ್ಜಿಯ ಕುರಿತು ವಿಚಾರಿಸಲಾಯಿತು. ಆದರೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಹೀಗಾಗಿ ದಿನಾಂಕ 26/06/2023 ರಂದು ಮೊದಲು ಸಲ್ಲಿಸಿದ ಅರ್ಜಿಯ ಉಲ್ಲೇಖವನ್ನು ಹಾಕಿ ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸಲಾಯಿತು.
ಆದರೆ ಇಲ್ಲಿಯವರೆಗೂ ಮಹನಗರ ಪಾಲಿಕೆಯವರು ಮಳೆಯ ನೀರು ಸುಗಮವಾಗಿ ಚರಂಡಿಗೆ ಹೋಗುವ ವ್ಯವಸ್ಥೆ ಮಾಡಲಿಲ್ಲ. ಇದರಿಂದ ಮಕ್ಕಳು ಶಾಲೆಗೆ ಬರುವಾಗ – ಹೋಗುವಾಗ ತೊಂದರೆ ಅನುಭವಿಸುತ್ತಿದ್ದಾರೆ. ಜೊತೆಗೆ ನೀರು ದಾಟಲು ಹೋಗಿ ನೀರಿನಲ್ಲಿ ಜಾರು ಬಿಳುತ್ತಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳು ತೊಂದರೆ ಅನುಭವಿಸುತ್ತಿದ್ದು, ಮಕ್ಕಳ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ಕೂಡಲೇ ಮಹಾನಗರ ಪಾಲಿಕೆಯ ಅಧಿಕಾರಿಗಳು ಶಾಲೆಯ ಮುಂಭಾಗದ ರಸ್ತೆಯ ಮೇಲೆ ಮಳೆ ನೀರು ನಿಲ್ಲದಂತೆ ವ್ಯವಸ್ಥೆಯನ್ನು ಕೂಡಲೇ ಮಾಡಬೇಕೆಂದು ಮಹನಗರ ಪಾಲಿಕೆಯವರಿಗೆ ಪತ್ರಿಕೆಯ ಮುಖಾಂತರ ಆಗ್ರಹಿಸಿದ್ದಾರೆ.