ಸುರಪುರ ವಲಯ ಮಟ್ಟದ ಕ್ರೀಡಾ ಕೂಟಕ್ಕೆ ಬಿಇಒ ಅಮರೇಶ ಕುಂಬಾರ ಚಾಲನೆ

0
82

ಸುರಪುರ: ಕ್ರೀಡಾ ಕೂಟದಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳು ಕ್ರೀಡಾ ಭಾವನೆ ಮೆರೆಯಬೇಕು,ಸೋಲು ಗೆಲುವು ಸಹಜ ಆದರೆ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಮರೇಶ ಕುಂಬಾರ ಮಾತನಾಡಿದರು.

ನಗರದ ಸರಕಾರಿ ಬಾಲಕರ ಪದವಿ ಪೂರ್ವ ಮಹಾ ವಿದ್ಯಾಲಯದ ಆವರಣದಲ್ಲಿ ನಡೆದ ಸುರಪುರ ವಲಯ ಮಟ್ಟದ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿ,ಕ್ರೀಡಾ ಕೂಟದಲ್ಲಿ ಸುರಪುರ ವಲಯ ಮಟ್ಟದ ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಎಲ್ಲರು ಕ್ರೀಡಾ ಮನೋಭಾವದಿಂದ ಆಟಗಳಲ್ಲಿ ಭಾಗವಹಿಸಿ ಯಾವುದೆ ಗದ್ದಲ ಗಲಾಟೆಗಳಿಗೆ ಅವಕಾಶ ನೀಡಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಂಶುಪಾಲ ಯಲ್ಲಪ್ಪ ಕಾಡ್ಲೂರ ಮಾತನಾಡಿ,ವಿದ್ಯಾರ್ಥಿಗಳಿಗೆ ಪಾಠದಷ್ಟೆ ಆಟವು ಮುಖ್ಯವಾಗಿದ್ದು ಎಲ್ಲರು ಶಾಂತಿ ರೀತಿಯಿಂದ ಭಾಗವಹಿಸಿ ಎಂದು ಸ್ಪರ್ಧಾಳುಗಳಿಗೆ ಹಾರೈಸಿದರು.

Contact Your\'s Advertisement; 9902492681

ನಂತರ ಕ್ರೀಡಾ ಧ್ವಜಾರೋಹಣ ನಡೆಸಿ ಅಕ್ಷರ ದಾಸೋಹದ ಅಧಿಕಾರಿ ಮೌನೇಶ ಕಂಬಾರವರಿಗೆ ಕ್ರೀಡಾ ಜ್ಯೋತಿ ನೀಡಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿ.ಆರ್.ಪೊಲೀಸ್ ಪಾಟೀಲ,ಸಂಜೀವಪ್ಪ ದರಬಾರಿ,ಭೀಮಣ್ಣ ಬೋಸಗಿ,ಆರ್.ಕೆ.ಕೋಡಿಹಾಳ,ಶರಣಗೌಡ ಪಾಟೀಲ,ಮಹೇಶ ಜಹಾಗೀರದಾರ,ಶರಣಬಸವ ಗಚ್ಚಿನ,ರವಿ ನಾಯಕ ಬೈರಿಮರಡಿ,ಹಣಮಂತ್ರಾಯ ದೊರೆ,ಹಣಮಂತ್ರಾಯ ಮೇಟಿಗೌಡ ಭಾಗವಹಿಸಿದ್ದರು.ಸಂಗಮ್ಮ ನಾಗಾವಿ ನಿರೂಪಿಸಿದರು,ದೈಹಿಕ ಶಿಕ್ಷಕ ಜೋಗಪ್ಪ ಸ್ವಾಗತಿಸಿದರು,ಜಯರಾಮ ಚವ್ಹಾಣ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here