ಕಲಬುರಗಿ: ಭಾರತೀಯ ಬೌದ್ಧ ಮಹಾ ಸಭಾ ಕಲಬುರಗಿ ನಗರ ಸಮಿತಿ ವತಿಯಿಂದ ನಗರದ ಕನ್ನಡ ಭವನದಲ್ಲಿ ಪದಾಧಿಕಾರಿಗಳ ಪದಗ್ರಹಣ ಹಾಗೂ ಸನ್ಮಾನ ಸಮಾರಂಭವು ಜರುಗಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾರತೀಯ ಬೌದ್ಧ ಮಹಾಸಭಾ ರಾಜ್ಯ ಅಧ್ಯಕ್ಷರಾದ ಆಯುಷ್ಮಾನ ಸೂರ್ಯಕಾಂತ ನಿಂಬಾಳಕರ್, ಅತಿಥಿಗಳಾಗಿ ಭಾರತೀಯ ಬೌದ್ಧ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಆಯುಷ್ಮಾನ ಸುರೇಶ ಕಾಣೆಕರ್, ಜಿಲ್ಲಾ ಅಧ್ಯಕ್ಷರಾದ ಆಯುಷ್ಮಾನ ಲಕ್ಷ್ಮಣ ಸೋನಕಾಂಬಳೆ, ಪ್ರಧಾನ ಕಾರ್ಯದರ್ಶಿ ಆಯುಷ್ಮಾನ ಗುರಣ್ಣ ಐನಾಪೂರ, ನಗರ ಕಾರ್ಯದರ್ಶಿ ಆಯುಷ್ಮಾನ ಕೊತಾಳಿ ಬುತಾಳಿ ಸಿರಸಗಿ, ನಗರ ಉಪಾ ಅಧ್ಯಕ್ಷೆ ಅಯುಷ್ಮತಿ ಮಾಯಾ ಸೂಗೂರ, ನಗರ ಉಪಾಧ್ಯಕ್ಷರು ಆಯುಷ್ಮಾನ ವಿಜಯಕುಮಾರ ಶಿಂದೆ, ಕಾರ್ಯಕ್ರಮದ ಅದ್ಯಕ್ಷತೆ ನಗರ ಸಮಿತಿಯ ಅಧ್ಯಕ್ಷ ಹರ್ಷವರ್ಧನ ಕಣ್ಣಿ ವಹಿಸಿದ್ದರು.
ಕಾರ್ಯಕ್ರಮ ನಿರೂಪಣೆ ನಗರ ಸಮಿತಿಯ ಖಜಾಂಚಿ ಸಿದ್ದರಾಮ ನಡಗೇರಿ, ವಂದನಾರ್ಪಣೆ ಉಪ ಅಧ್ಯಕ್ಷರಾದ ವಿಜಯಕುಮಾರ ರಾವೂರ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ನಗರ ಪದಾಧಿಕಾರಿಗಳು ಸೇರಿದಂತೆ ಉಪಾಸಕ, ಉಪಾಸಕಿಯರು ಭಾಗವಹಿಸಿದ್ದರು.