Monday, July 15, 2024
ಮನೆಬಿಸಿ ಬಿಸಿ ಸುದ್ದಿಡಾ. ಎಂ.ಬಿ ಹಡಪದ ಸುಗೂರ ಎನ್ ನೇತೃತ್ವದಲ್ಲಿ ನಿರ್ಗತಿಕರಿಗೆ ಉಚಿತ ಕ್ಷೌರ ಸೇವೆ

ಡಾ. ಎಂ.ಬಿ ಹಡಪದ ಸುಗೂರ ಎನ್ ನೇತೃತ್ವದಲ್ಲಿ ನಿರ್ಗತಿಕರಿಗೆ ಉಚಿತ ಕ್ಷೌರ ಸೇವೆ

ಕಲಬುರಗಿ: ಕಲ್ಯಾಣ ಕರ್ನಾಟಕ ಹೆಬ್ಬಾಗಿಲು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ಆರಾಧ್ಯ ದೈವರಾದ ಕರ್ನಾಟಕ ಚೇತನ ನಾಡಶ್ರೀ ರತ್ನ ಷ.ಬ್ರ.ಶ್ರೀ ಡಾ. ಸಿದ್ಧ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ 59 ನೇ ವರ್ಷದ ಜನ್ಮದಿನದ ಅಂಗವಾಗಿ ಪ್ರತಿವರ್ಷ ದಂತೆ ಈ ವರ್ಷವೂ ಶ್ರೀಗಳ ಜನ್ಮ ದಿನದ ಅಂಗವಾಗಿ ಸತತವಾಗಿ ನಾಲ್ಕು ವರ್ಷಗಳಿಂದ ಶ್ರೀಗಳ ಜನ್ಮ ದಿನದ ನಿಮಿತ್ತವಾಗಿ ಈ ರೀತಿಯ ವಿಭಿನ್ನ ಸೇವೆ ಮಾಡುತ್ತಾ ಬಂದಿದ್ದಾರೆ.

ನಗರದ ಅಫಜಲಪುರ ರಸ್ತೆಯ ಬಿದ್ದಾಪೂರ ಕಾಲೋನಿಯಲ್ಲಿ ಇರುವ ಅನಾಥ (ನಿರ್ಗತಿಕರ) ಕೇಂದ್ರದ ವೃದ್ಧಾಶ್ರಮದಲ್ಲಿ 150 ಕ್ಕೊ ಹೆಚ್ಚು ಅನಾಥ ನಿರ್ಗತಿಕರಿಗೆ
‘ಉಚಿತ -ಕ್ಷೌರ” ಸೇವೆಯನ್ನು ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮುದಾಯದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಅವರ ನೇತೃತ್ವದಲ್ಲಿ ನಿರಂತರವಾಗಿ ವಿವಿಧ ಕಡೆ ಯಲ್ಲಿಯೂ ಸೇರಿ ಒಟ್ಟು 9ನೇ ಬಾರಿ ಉಚಿತ ಕ್ಷೌರ ಸೇವೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಲ್ಲಿಯವರೆಗೋ 1100 ಕ್ಕೊ ಹೆಚ್ಚು ಅನಾಥ ರಿಗೆ ಈ ರೀತಿಯ ಉಚಿತ ಕ್ಷೌರ ಸೇವೆ ಸಲ್ಲಿಸಲಾಗಿದೆ.

ಈ ಸಂಧರ್ಭದಲ್ಲಿ ಶಹಾಬಾದ ಹಡಪದ ದೇವಸ್ಥಾನ ಗುರುಗಳು ಶ್ರೀ ಭಾಲ ಬ್ರಹ್ಮಚಾರಿ ರಾಜಶಿವಯೋಗಿ, ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷ ಬಸವರಾಜ ಹಡಪದ ಸುಗೂರ ಎನ್, ರಾಜ್ಯ ಕಾರ್ಯಾಧ್ಯಕ್ಷ ನಾಗರಾಜ ಸಜ್ರ್ಯಾಪೂರ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ. ಹಳ್ಳಿ, ರಾಜ್ಯ ಕಾನೂನು ಸಲಹೆಗಾರ ರಮೇಶ ಮಲಕೂಡ, ಕಲಬುರಗಿ ಜಿಲ್ಲಾಧ್ಯಕ್ಷ ಈರಣ್ಣ ಸಿ.ಹಡಪದ ಸಣ್ಣೂರ, ಕಲಬುರಗಿ ಜಿಲ್ಲಾ ಕಾರ್ಯಾಧ್ಯಕ್ಷ ಭಗವಂತ ಶಿಕ್ಷಕರು ಹೊನ್ನಕಿರಣಗಿ, ಜಿಲ್ಲಾ ಸಹ ಕಾರ್ಯದರ್ಶಿ ನಿಂಗಣ್ಣ ಯಾತನೂರ, ಕಲಬುರಗಿ ನಗರ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಹಡಪದ ಸಾವಳಗಿ, ಕಲಬುರಗಿ ತಾಲೂಕಿನ ಅಧ್ಯಕ್ಷ ಚಂದ್ರಶೇಖರ್ ಹಡಪದ ತೋನಸನಹಳ್ಳಿ , ಕಲಬುರಗಿ ಕಾರ್ಯದರ್ಶಿ ವಿನೋದ ಅಂಬಲಗಾ, ಶಹಾಬಾದ ತಾಲೂಕ ಅಧ್ಯಕ್ಷ ಅನೀಲ ಹಳೇ ಶಹಾಬಾದ, ಕಲಬುರಗಿ ತಾಲೂಕ ಸಂ.ಕಾರ್ಯದರ್ಶಿ ಶಂಕರ ಹಡಪದ ಹರವಾಳ, ಶಹಾಬಾದ ಉಪಾಧ್ಯಕ್ಷ ಶಿವಲಿಂಗಪ್ಪ ಹಡಪದ ಸುಗೂರ ಎನ್, ಚಿತ್ತಾಪುರ ಕಾರ್ಯಾಧ್ಯಕ್ಷ ನಾಗರಾಜ ಹಡಪದ ಸಾತನೂರ, ಸಂಗಮೇಶ ಹಡಪದ ಮಾರಡಗಿ, ನೆಲ್ಲೂಗಿ ವಲಯ ಘಟಕ ಅಧ್ಯಕ್ಷ ಶಿವಪುತ್ರ ಹಡಪದ ನೆಲ್ಲೂಗಿ, ಶಂಭುಲಿಂಗ ಹಡಪದ ಮುತ್ತಕೂಡ, ಬಸವರಾಜ ಹಡಪದ ಮೂಡಬೂಳ, ಬಾಬು ಹಡಪದ ಮೇಳಕುಂದಾ, ಶೇಖರ ಹಡಪದ ಪಟ್ಟಣ, ಸಚಿನ ಹಡಪದ ಜೇರಟಗಿ ಸೇರಿದಂತೆ ಅನೇಕ ಸಮಾಜದ ಯುವಕ ಮಿತ್ರರು ಮತ್ತು ಸಮಾಜದ ಹಿರಿಯರು ಇದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular