ಕಲಬುರಗಿ: ನಗರದ ಹೊರವಲಯದ ಬುದ್ದ ವಿಹಾರದಲ್ಲಿ ದಲಿತ ಯುವ ನಾಯಕ ಅರುಣ ಭರಣಿ ಅವರ ನೇತೃತ್ವದಲ್ಲಿ 68ನೇ ಧರ್ಮಚಕ್ರ ಪ್ರವರ್ತನ ಪ್ರಯುಕ್ತ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಮಹಾದೇವ ಮೋಘಾ, ಪ್ರಭು ಶಿಲ್ಡ್, ಚಂದ್ರಕಾಂತ ವಾಲಿ, ಅರುಣಕುಮಾರ ಹತಗುಂದಿ, ಸುಗಂಧಿ, ಅಮರ ಯಕಲೂರೆ, ಮಲ್ಲಿಕಾರ್ಜುನ ಗಿರಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.