ಶಹಾಪುರ; ತಾಲೂಕಿನ ಬಿರನೂರಿನ ಯಶಸ್ವಿ ಇಂಟರನ್ಯಾಷನಲ್ ಶಾಲೆಯಲ್ಲಿ ಇದೇ ದಿ.28 ರಂದು ಯಶಸ್ವಿ ವಿಜ್ಞಾನ ಮೇಳ ನಡೆಯಲಿದೆ ಎಂದು ಶಾಲೆಯ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
ಉದ್ಘಾಟಕರಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಅಧ್ಯಕ್ಷ ಗಿರೀಶ್ ಕಡ್ಲೆವಾಡ ಹಾಗೂ ಮುಖ್ಯ ಅತಿಥಿಯಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಉಪಾಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ, ಎಕ್ಸಲೆಂಟ ಟುಟೋರಿಯಲ್ ಅಧ್ಯಕ್ಷ ಡಾ.ಮನೋಜ ಕುಮಾರ ಎ ಬುರಬುರೆ ಆಗಮಿಸಲಿದ್ದಾರೆ.
ಅಧ್ಯಕ್ಷತೆಯನ್ನು ರೇವಣಸಿದ್ದ ರೆಡ್ಡಿ ಅಧ್ಯಕ್ಷರು ಯಶಸ್ವಿ ಇಂಟರನ್ಯಾಷನಲ್ ಸ್ಕೂಲ್, ಶೈಕ್ಷಣಿಕ ನಿರ್ದೇಶಕ ನಾಗರಾಜ ಎಸ್ ಪಾಟೀಲ ಅವರು ವಹಿಸಲಿದ್ದಾರೆ. ಶಾಲೆಯ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವಿಜ್ಞಾನ ಮತ್ತು ಸಂಶೋಧನೆಗಳನ್ನು ಪ್ರರ್ದಶಿಸಲಿದ್ದಾರೆ. ಈ ವಿಜ್ಞಾನ ಮೇಳಕ್ಕೆ ಅನೇಕ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಆಗಮಿಸಲಿದ್ದಾರೆ.