ವಾಡಿ: ಪಟ್ಟಣದ ಸ್ವಾಮಿ ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ನ ಸ್ವಾಮಿ ವಿವೇಕಾನಂದ ಪ್ಲೇ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವ ನಿಮಿತ್ತ ಮಕ್ಕಳು ಶ್ರೀರಾಮ,ಕೃಷ್ಣ,ಸಾವಿತ್ರಿ ಭಾಯಿ ಪುಲೆ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರ,ರಾಷ್ಟ್ರ ನಾಯಕರ ವೇಷಭೂಷಣದಲ್ಲಿ ಗಮನ ಸೆಳೆದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ ಸೇವಲಾಲ ಮಂದಿರದ ಅರ್ಚಕರಾದ ಠಾಕೂರ ಮಹಾರಾಜ,ಡಿಎವಿ ಶಾಲೆಯ ಪ್ರಾಂಶುಪಾಲರಾದ ಟಿವಿಎನ್ ಶಿವಕುಮಾರ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ,ಸಮಾಜ ಸೇವಕ ರವೀಂದ್ರ ನಾಯಕ,ಡಿಎವಿ ಶಾಲೆಯ ದೈಹಿಕ ಶಿಕ್ಷಕ ಕೆ ಶಾನಗಿತರಾವ ಹಾಗೂ ಶಾಲೆ ಆಡಳಿತ ಮಂಡಳಿಯ ಪವಿತ್ರ ಪವಾರ,ಪೂಜಾ ರಾಠೋಡ, ರೀನಾ ಪವಾರ, ಸಂತೋಷ ಪವಾರ ಸೇರಿದಂತೆ ಅನೇಕ ಮಕ್ಕಳು ಪೋಷಕರು ಇದ್ದರು.