ಸುರಪುರ: ನಗರದ ಮೆಥೋಡಿಸ್ಟ್ ಸೆಂಟ್ರಲ್ ಚರ್ಚನಲ್ಲಿ ರವಿವಾರದಂದು ವಿಶ್ವ ತಾಯಂದಿರ ದಿನ ಹಾಗೂ ದಾದಿಯರ ದಿನ ಪ್ರಯುಕ್ತ ವಿಶೇಷ ಪ್ರಾರ್ಥನೆ ಹಾಗೂ ತಾಯಂದಿರು ಹಾಗೂ ದಾದಿಯರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಮೇಲ್ವಿಚಾರಕ ರೆ.ಸತ್ಯಮಿತ್ರ ಅವರು ತಾಯಂದಿರು ಹಾಗೂ ದಾದಿಯರಗಳಿಗೋಸ್ಕರ ವಿಶೇಷ ಪ್ರಾರ್ಥನೆ ನೆರವೇರಿಸಿದರು, ಸಭಾಪಾಲಕ ರೆ.ಪ್ರಕಾಶ ಹಂಚಿನಾಳ ಅವರು ತಾಯಂದಿರು ಹಾಗೂ ದಾದಿಯರು(ನರ್ಸಗಳು) ಪ್ರೀತಿ,ವಾತ್ಸಲ್ಯ, ವಿಶ್ವಾಸ ಹಾಗೂ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ ದೈವ ಸಂದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ತಾಯಂದಿರು ಹಾಗೂ ನರ್ಸಗಳಿಗೆ ಹೂ ಗುಚ್ಛ ನೀಡಿ ಸನ್ಮಾನಿಸಲಾಯಿತು, ಪ್ರಮುಖರಾದ ಸಾಮುವೇಲ್ ಮ್ಯಾಥ್ಯೂ, ವಸಂತಕುಮಾರ,ಅಮಿತಪಾಲ್,ವಿಜಯಕುಮಾರ,ಥಾಮಸ್ ಮ್ಯಾಥ್ಯೂ,ಜಿಮ್ಮಿ ಜಸ್ಟೀನ್, ಹನೋಕ, ರವಿಕುಮಾರ, ಮನೋರಾಮ್ಮ, ಸುನೀಲಾ ಶಾಂತಕುಮಾರ,ಸುಜಾತಾ ಜಯಪ್ಪ,ಆಲೀಸ್ ಜಾನವೆಸ್ಲಿ, ಪ್ರಭುಕುಮಾರಿ, ಸುಮತಿ, ಸುಕುಮಾರಿ,ಸಾಗರಿಕಾ,ಸುಜಾತಾ,ಶಾಲಿನಿ,ಶೋಭಾ,ಸುನೀತಾ,ಸ್ಟೆಲ್ಲಾ,ರೆಬೆಕ್ಕಾ,ರತ್ಮಮ್ಮ ಹಾಗೂ ಪವಿತ್ರಾ ಇತರರಿದ್ದರು.