ಒಳ ಮೀಸಲಾತಿಗೆ ಸುಪ್ರಿಂ ಅಸ್ತು: ದೀಪಕ್ ಹೊಸ್ಸೂರಕರ್ ಹರ್ಷ

0
59
  • ಎಂ.ಡಿ ಮಶಾಖ ಚಿತ್ತಾಪುರ

ಚಿತ್ತಾಪುರ: 2003ರಿಂದ ಅಧಿಕೃತವಾಗಿ ಸರ್ಕಾರದ ಮಟ್ಟದಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ಅನುಗುಣವಾಗಿ ಒಳಮೀಸಲಾತಿಯ ಜಾರಿಗಾಗಿ ನಡೆದಿದ್ದ ಹೊರಾಟಕ್ಕೆ ನ್ಯಾಯಂಗದಿಂದಲೂ ಸಾಂವಿಧಾನಿಕ ಚೌಕಟ್ಟು ಪಡೆಯುವಲ್ಲಿ ಯಶ ಸಿಕ್ಕಿರುವುದು ಆ ಸಮಾಜಕ್ಕೆ ನ್ಯಾಯ ಸಿಕ್ಕಂತಾಗಿದೆ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸೂರಕರ್‌ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮಟ್ಟಿಗೆ ಒಳಮೀಸಲಾತಿ ಹೊರಾಟವು ಅತ್ಯಂತ ಯಶಸ್ವಿಯಾಗಿ ನಡೆದುಕೊಂಡು ಬಂದಿದ್ದು ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ. ಆ ನಿಟ್ಟಿನಲ್ಲಿ ನಮ್ಮೆಲ್ಲರ ಹಕ್ಕು ಸಾಮಾಜಿಕ ನ್ಯಾಯಕ್ಕೆ ಹತ್ತಿರವಾಗಿದ್ದು ಇದಕೊಂದು ಪರಿಹಾರ ಕಂಡು ಹಿಡಿದು ಕೊನೆಯವರೆಗೂ ದಡ ಮುಟ್ಟಿಸಿದ ಕಿರ್ತಿ ಬಸವಮೂರ್ತಿ ಮಾದರ ಶ್ರೀಗಳು ಹಾಗೂ ಮಾದಿಗ ಸಮಾಜದ ಹಿರಿಯ ನಾಯಕರಾದ ಗೊವಿಂದ ಕಾರಜೋಳ ಮತ್ತು ಎ. ನಾರಾಯಣ ಸ್ವಾಮಿಯವರಿಗೆ ಸಲ್ಲುತ್ತದೆ ಎಂದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here