ಸ್ವಾತಂತ್ರೋತ್ಸವ ನಿಮಿತ್ತ ಹಲವರಿಗೆ ಸನ್ಮಾನ

0
49

ಕಲಬುರಗಿ; ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ ಸಂಸ್ಥೆಯ ವತಿಯಿಂದ, ಕೈಮಗ್ಗ ನಸಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ನೇಕಾರರ ತ್ಯಾಗ ಬಲಿದಾನ ಮತ್ತು ಪುನರುತ್ಥಾನ ಗೊಳಿಸುವ ಕಾರ್ಯಕ್ಕೆ ಪ್ರೋತ್ಸಾಹಿಸುವ ಕಾರ್ಯಕ್ರಮದಲ್ಲಿ ಹಲವರಿಗೆ ತ್ರಿವಣ೯ ಧ್ವಜದ ಹಾಕಿ ಗೌರವಿಸಲಾಯಿತು.

ಸಪ್ತ ನೇಕಾರ ಸಮುದಾಯಗಳ ಎಲ್ಲಾ ಅಧ್ಯಕ್ಷರನ್ನು, ವಿವಿಧ ಮಠಾಧೀಶರನ್ನು, ಸಾಹಿತಿಗಳನ್ನು, ಹಿರಿಯ ವಕೀಲರಿಗೆ, ಕಿರಿಯ ನ್ಯಾಯವಾದಿಗಳಿಗೆ, ಹಿರಿಯ ಪತ್ರಕರ್ತ-ಸಂಪಾದಕರಿಗೆ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹಿಳೆಯರಿಗೆ ಹೀಗೆ ಒಟ್ಟು 78  ಜನರಿಗೆ ಸಂಕೇತದ ರೂಪದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

Contact Your\'s Advertisement; 9902492681

ಸಪ್ತ ನೇಕಾರರ 21 ಯುವಕ ಸಂಘದ ಪಧಾದಿಕಾರಿಗಳಿಗೆ ಸನ್ಮಾನಿ ಕನ್ನಡ ಸಾಹಿತ್ಯ ಪರಿಷತ್ತಿನ 9 ಜನರನ್ನು ಗೌರವಿಸಲಾಯಿತು. ದೇಶಾಭಿಮಾನ ಸದಾ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲಿ ಎನ್ನುವ ಸಂಕಲ್ಪದೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸನ್ಮಾನಿಸಿ 78 ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು.

ಸಂಸ್ಥೆಯ ಸಂಸ್ಥಾಪಕ ಶಿವಲಿಂಗಪ್ಪಾ ಅಷ್ಟಗಿಯವರ ನೇತೃತ್ವದಲ್ಲಿ ಮತ್ತು ಸಪ್ತ ನೇಕಾರರ ಸೇವಾ ಸಂಘದ ಕಾರ್ಯದರ್ಶಿ ಹಾಗೂ ಕುರಹಿನ ಶೆಟ್ಟಿ ನೇಕಾರ ಸಮಾಜದ ಪ್ರಧಾನ ಕಾರ್ಯದರ್ಶಿ ಮ್ಯಾಳಗಿ ಚಂದ್ರಶೇಖರ್ ರವರ ಉಸ್ತುವಾರಿಯಲ್ಲಿ, ತೊಗಟವೀರ ಸಮಾಜದ ಶ್ರೀನಿವಾಸ ಬಲಪೂರ್, ಸ್ವಕುಳ ಸಾಲಿ ಸಮಾಜದ ಭಂಡಾರಿ ರಾಜಗೋಪಾಲ, ಮಲ್ಲಿನಾಥ್ ಬಡ್ಡುರ್, ಹಿರಿಯರಾದ  ಗುರುಲಿಂಗಪ್ಪ ಹತ್ತರಕಿ, ನ್ಯಾಯವಾದಿ ಜೇನವೆರಿ ವಿನೋದ ಕುಮಾರ ರವರ ಸಂಚಾಲನೆಯೊಂದಿಗೆ ಅದ್ದೂರಿಯಾಗಿ ಸ್ವಾತಂತ್ರೋತ್ಸವ ಆಚರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here