ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

0
14

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು ಹೆಗಲು ಕೊಟ್ಟು ಸಂಘಟನೆಯನ್ನು ಮತ್ತಷ್ಟು ಗಟ್ಟಿಯಾಗಿ ಬೆಳೆಸಿ ನಾಡಿನಲ್ಲಿಯ ನೊಂದವರಿಗೆ ನ್ಯಾಯ ಕೊಡಿಶೋಣ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆಯ ರಾಜ್ಯ ಉಪ ಪ್ರಧಾನ ಸಂಚಾಲಕ ನಾಗಣ್ಣ ಬಡಿಗೇರ ತಿಳಿಸಿದರು.
ನಗರದ ಟೈಲರ್ ಮಂಜಿಲ್ ಪ್ರವಾಸಿ ಮಂದಿರದಲ್ಲಿ ನಡೆದ ಸಂಘಟನೆಯ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಎಲ್ಲರು ಸಂಘಟಿತರಾಗಿ ಸಮಾಜದ ಏಳಿಗೆಗಾಗಿ ದುಡಿಯೋಣ ಎಂದರು.

ಇದೇ ಸಂದರ್ಭದಲ್ಲಿ ಕಲಬುರ್ಗಿ ವಿಭಾಗಿಯ ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ,ನಮ್ಮ ಸಂಘಟನೆ ಇದುವರೆಗೆ ಅನೇಕ ಜನಪರ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದು,ತಾವೆಲ್ಲರು ಇಂದು ನೂತನ ಪದಾಧಿಕಾರಿಗಳು ಒಗ್ಗಟ್ಟಿನಿಂದ ಪ್ರತಿ ಹೋಬಳಿ,ಹಳ್ಳಿ ಗಳಲ್ಲಿಯೂ ಸಂಘಟನೆಯನ್ನು ಕಟ್ಟುವ ಮೂಲಕ ದೀನ,ದಲಿತ,ಶೋಷಿತರ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ ಮರುಳಸಿದ್ಧಪ್ಪ ನಾಯ್ಕಲ್,ಜಿಲ್ಲಾ ಸಂಘಟನಾ ಸಂಚಾಲಕರಾದ ಮಾಳಪ್ಪ ಕಿರದಳ್ಳಿ,ಪರಶುರಾಮ ಮಹಲರೋಜಾ,ಭೀಮರಾಯ ಬಳಿಚಕ್ರ,ಅಶೋಕ ನಾಯ್ಕಲ್,ಬಸವರಾಜ ಅಣಬಿ,ಭೀಮರಾಯ ಅಗ್ನಿ,ಶಹಾಪುರ ತಾ.ಪ್ರ.ಸಂಚಾಲಕ ಚಂದ್ರಕಾಂತ ಬಜೇರಿ,ಹಿರಿಯ ಮುಖಂಡರಾದ ಬಸವರಾಜ ಗೋನಾಳ,ಸಾಹೇಬಗೌಡ ವಾಗಣಗೇರಾ,ಚಂದ್ರು ಕಿರದಳ್ಳಿ ತಾಂಡಾ,ಸದಾಶಿವ ಕರಡಕಲ್,ಪ್ರಶಾಂತ (ಉಗ್ರಂ),ರಮೇಶ ಅರಕೇರಿ,ಸಾಯಬಣ್ಣ ಕಿರದಳ್ಳಿ,ಹಣಮಂತ ವಾಗಣಗೇರಾ,ಹೊನ್ನಪ್ಪ ಗೌಂಡಿ,ಮಲ್ಲಿಕಾರ್ಜುನ ಪರಸನಹಳ್ಳಿ,ಪರಶುರಾಮ ನಾಟೇಕಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಂಘಟನೆಯ ಜಿಲ್ಲಾ ಉಪ ಪ್ರಧಾನ ಸಂಚಾಲಕ ಮಾಳಪ್ಪ ಕಿರದಳ್ಳಿ ಎಲ್ಲಾ ನಾಯಕರ ಮಾರ್ಗದರ್ಶನದಲ್ಲಿ ಹಾಗೂ ಕಾರ್ಯಕರ್ತರ ಅಭಿಪ್ರಾಯದಂತೆ ನೂತನ ಪದಾಧಿಕಾರಿಗಳನ್ನು ಘೋಷಿಸಿದರು.ಪದಾಧಿಕಾರಿಗಳು: ಶರಣಪ್ಪ ತಳವಾರಗೇರಾ (ತಾ.ಪ್ರಧಾನ ಸಂಚಾಲಕ), ಗೊಲ್ಲಾಳಪ್ಪ ಕಟ್ಟಿಮನಿ ಕಿರದಳ್ಳಿ,ಮಲ್ಲಿಕಾರ್ಜುನ ತಳವಾರಗೇರಾ,ಪರಶುರಾಮ ಸಾಸನೂರ,ಪ್ರಕಾಶ ಕಟ್ಟಿಮನಿ,ಕೆಂಚಪ್ಪ ಕಟ್ಟಿಮನಿ,ಶರಣು ಅಂಬರಕೇಡ ಬೋನ್ಹಾಳ,ಲಾಲು ಚವ್ಹಾಣ,ಮೌನೇಶ ತೆಗ್ಗಿಹಳ್ಳಿ (ಸಂಘಟನಾ ಸಂಚಾಲಕರು), ಬಲಭೀಮ ಹಾದಿಮನಿ (ಖಜಾಂಚಿ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here