ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಸದಸ್ಯ ಬಡಿಗೇರಗೆ ಸನ್ಮಾನ

0
104

ಕಲಬುರಗಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನೇಮಕಗೊಂಡ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸುರೇಶ ಬಡಿಗೇರ ಅವರನ್ನು ಬುಧವಾರದಂದು ಸಹೃದಯಿ ಗೆಳೆಯರ ಬಳಗದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ನಂತರ ಮಾತನಾಡಿದ ಸುರೇಶ ಬಡಿಗೇರ, ಕನ್ನಡ ನಾಡು ನುಡಿಗಾಗಿ ನನ್ನ ಅವಧಿಯಲ್ಲಿ ಈ ಭಾಗದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದ ಅವರು, ಕನ್ನಡ ಭಾಷೆ ಉಳಿವು ಹಾಗೂ ಬೆಳೆಸಲು ಅಹರ್ನಿಷಿ ಶ್ರಮಿಸುವುದಾಗಿ ಹೇಳಿದರು.

Contact Your\'s Advertisement; 9902492681

ಪತ್ರಕರ್ತ-ಶರಣ ಸಾಹಿತಿ ಶಿವರಂಜನ್ ಸತ್ಯಂಪೇಟೆ, ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ತಮ್ಮ ಅಧಿಕಾರಾವಧಿಯಲ್ಲಿ ಈ ಭಾಗದ ಕನ್ನಡದ ಏಳ್ಗೆಗಾಗಿ ಅತ್ಯಂತ ಜವಾಬ್ದಾರಿಯಿಂದ ಕಾರ್ಯನುರ್ವಹಿಸುವಂತೆ ಮನವಿ ಮಾಡಿದರು.

ಪ್ರಮುಖರಾದ ಶ್ರೀಕಾಂತ ಪಾಟೀಲ ತಿಳಗೂಳ, ಬಿ ಎಂ.ಪಾಟೀಲ ಕಲ್ಲೂರ, ರಮೇಶ ಹಣಕುಣಿ, ರಾಘವೇಂದ್ರ ಮರತೂರ, ಬೆಳ್ಳಪ್ಪ ಮರತೂರ ಸೇರಿ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here