ಸುರಪುರದಲ್ಲಿ ರಾಜ್ಯ ಮಟ್ಟದ ಹಾರ್ಡ್ ಟೆನ್ನಿಸ್ ಬಾಲ್ ಟೂರ್ನಿ

0
61

ಸುರಪುರ: ಸ್ಥಳಿಯ ಕಾಂಗ್ರೇಸ್ ಪಕ್ಷದ ಯುವ ಮುಖಂಡರಾಗಿದ್ದ ದಿ|| ಶ್ರೀ ರಾಜಾ ಶ್ರೀರಾಮನಾಯಕ ರವರ ಸ್ಮರ್ಣಾರ್ಥವಾಗಿ ದಿನಾಂಕ: ೦೮-೦೨-೨೦೨೦ ರಂದ ನಗರದ ಶ್ರೀ ಪ್ರಭು ಮಹಾ ವಿದ್ಯಾಲಯದ ಮೈದಾನದಲ್ಲಿ ರಾಜ್ಯ ಮಟ್ಟದ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ರಾಜಾ ಮೌನೇಶ್ವರ ನಾಯಕ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಮ್ಮ ಆರ್.ಕೆ.ಎನ್ ಕ್ರಿಕೆಟ್ ಕ್ಲಬ್‌ನಿಂದ ಪ್ರತಿವರ್ಷ ಈ ಟೂರ್ನಿಯನ್ನು ಆಯೋಜಿಸಿಕೊಂಡು ಬರುತ್ತಿದ್ದು,ಈ ವರ್ಷವೂ ನಡೆಸಲಾಗುತ್ತಿದೆ. ಈಗಾಗಲೆ ಕ್ರೀಡಾಕೂಟದ ನೊಂದಣಿ ಕಾರ್ಯ ಆರಂಭವಾಗಿದ್ದು ದಿನಾಂಕ ೦೫-೦೨-೨೦೨೦ ತಂಡಗಳ ಹೆಸರು ನೊಂದಣಿಗೆ ಕೊನೆಯ ದಿನವಾಗಿದೆ.

Contact Your\'s Advertisement; 9902492681

ಟೂರ್ನಿಯ ಪ್ರಥಮ ಬಹುಮಾನ ೧.೫೦ ಲಕ್ಷ ರೂಪಾಯಿಗಳು ಹಾಗು ಒಂದು ಟ್ರೋಫಿ ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಇವರಿಂದ ಹಾಗೂ ದ್ವಿತಿಯ ಬಹುಮಾನ ೭೫ ಸಾವಿರ ರೂಪಾಯಿಗಳು ಒಂದು ಟ್ರೋಫಿ ವಿಠ್ಠಲ ವಿ ಯಾದವ ರಾಜ್ಯ ಅಪೆಕ್ಸ್ ಬ್ಯಾಂಕ ನಿರ್ದೇಶಕರು ಹಾಗೂ ವೆಂಕೋಬ ಯಾದವ ಪ್ರಥಮ ದರ್ಜೆ ಗುತ್ತಿಗೆದಾರರು ಇವರುಗಳಿಂದ ನೀಡಲಾಗುತ್ತಿದೆ.ಇದರ ಜೊತೆಗೆ ಇನ್ನೂ ಅನೇಕ ವೈಯಕ್ತಿಕವಾದ ಬಹುಮಾನಗಳನ್ನು ನೀಡಲಾಗುತ್ತಿದ್ದು, ಪಂದ್ಯಾವಳಿಗಳಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗಾಗಿ ಸಂಪತ್(ಚೀನಿ ಮರೆಪ್ಪ):೯೪೪೮೫೨೨೨೨೨, ವೆಂಕಟೇಶ ಸೂರ್ಯವಂಶಿ: ೯೭೩೧೬೩೪೪೮೫೬, ಸಂಕೇತ ಬುಕ್‌ಸ್ಟಾಲ್:೮೮೬೧೪೮೭೯೪೭, ವೆಂಕಟೇಶ ಸ್ಪೊರ್ಟಸ್ ಗ್ಯಾಲರಿ: ೯೮೪೫೭೭೯೧೪೩ ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಆಯೋಜಕ ಮಂಡಳಿ ವತಿಯಿಂದ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here