ಸುರಪುರ ತಾಲೂಕು ಭೂ ನ್ಯಾಯ ಮಂಡಳಿ ರಚನೆ

0
213

ಸುರಪುರ: ಸುರಪುರ ತಾಲೂಕು ಭೂ ನ್ಯಾಯ ಮಂಡಳಿ ರಚನೆಗೊಳಿಸಿ ಸರಕಾರ ಆದೇಶ ಹೊರಡಿಸಿದ್ದು, ತಾಲೂಕಿನ ವಿವಿಧ ಗ್ರಾಮಗಳ ನಾಲ್ವರನ್ನು ಮಂಡಳಿಯ ಸದಸ್ಯರನ್ನಾಗಿ ನೇಮಕಗೊಳಿಸಿ ಸರಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಯವರು ಪ್ರಕಟಣೆ ಹೊರಡಿಸಿದ್ದಾರೆ.

ಯಾದಗಿರಿ ಜಿಲ್ಲಾ ಉಪವಿಭಾಗಾಧಿಕಾರಿಗಳು ಅಧ್ಯಕ್ಷರಾಗಿದ್ದು,ಸುರಪುರ ತಹಸೀಲ್ದಾರರು ಕಾರ್ಯದರ್ಶಿಗಳಾಗಿರುವ ಭೂ ನ್ಯಾಯ ಮಂಡಳಿಗೆ ಸದಸ್ಯರುಗಳಾಗಿ ಪ್ರಕಾಶ ಎ.ಕುಂಬಾರ ಕಕ್ಕೇರಾ,ಪಾರಪ್ಪ ಎಲ್.ಗುತ್ತೇದಾರ ಸುರಪುರ,ದೇವರಾಜ ಬಿ.ಮಕಾಶಿ ಹೆಮನೂರ ಹಾಗು ಶಶಿಕಲಾ ಎಸ್.ಪಾಟೀಲ್ ಹಸನಾಪುರ ಇವರುಗಳನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here