ಗುಲ್ಬರ್ಗಾ ವಿವಿಯಲ್ಲಿ ರಾಷ್ಟ್ರೀಯ ಬೌದ್ಧ ಸಾಹಿತ್ಯ ಸಮ್ಮೇಳನ

0
43

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ದಶಮಾನೋತ್ಸವ ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ಸುವರ್ಣ ಸಂಭ್ರಮದ ನಿಮಿತ್ತವಾಗಿ ಎರಡು ದಿನಗಳ ರಾಷ್ಟ್ರೀಯ ಬೌದ್ಧ ಸಾಹಿತ್ಯ ಸಮ್ಮೇಳನವನ್ನು ಮಾ. 11 ಮತ್ತು 12 ರಂದು ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಸಾಮ್ರಾಟ ಅಶೋಕ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ.

ಖ್ಯಾತ ಸಂಶೋಧಕರಾದ ಪ್ರೊ. ವಸಂತಕುಮಾರ ತಾಳ್ತಜೆ ಅವರು ಕಾರ್ಯಕ್ರಮ ಉದ್ಘಾಟಿಸುವರು. ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲೆಪುರಂ ಜಿ. ವೆಂಕಟೇಶ ಅವರು ಆಶಯ ಭಾಷಣ ಮಾಡುವರು. ಪ್ರಭಾರ ಕುಲಪತಿಗಳಾದ ಪ್ರೊ. ದೇವಿದಾಸ ಮಾಲೆ ಅವರು ಅಧ್ಯಕ್ಷತೆವಹಿಸುವರು ಮುಖ್ಯತಿಥಿಗಳಾಗಿ ರಂಗಾಯಣ ನಿರ್ದೇಶಕರಾದ ಪ್ರಭಾಕರ ಜೋಷಿ, ಚಂದ್ರಶೇಖರ ನಿಟ್ಟೂರೆ, ಪ್ರೊ. ಜಿ.ಎಂ. ವಿದ್ಯಾಸಾಗರ ಭಾಗವಹಿಸುವರು.

Contact Your\'s Advertisement; 9902492681

ಕುಲಸಚಿವರಾದ ಪ್ರೊ. ಸಿ. ಸೋಮಶೇಖರ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಸಂಜೀವಕುಮಾರ ಕೆ.ಎಂ, ವಿತ್ತಾಧಿಕಾರಿಗಳಾದ ಪ್ರೊ. ಬಿ. ವಿಜಯ ಪಾಲಿ ನಿರ್ದೇಶಕರಾದ ಪ್ರೊ. ಎಚ್.ಟಿ. ಪೋತೆ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಕನ್ನಡ ಬೌದ್ಧ ಸಾಹಿತ್ಯ ಸಂಪುಟಗಳು ಜಾನಾರ್ಪಣೆ ಮಾಡಲಾಗುವುದು. ಅದೇ ದಿನ 12 ಗಂಟೆಗೆ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದ ನಾಗಾರ್ಜುನ ವೇದಿಕೆಯಲ್ಲಿ ಮೂರು ಗೋಷ್ಠಿಗಳು ಜರುಗಲಿವೆ ಮತ್ತು ಅನುಭವ ಮಂಟಪ ಆಮ್ರಪಾಲಿ ವೇದಿಕೆಯಲ್ಲಿ ಮೂರು ಗೋಷ್ಠಿಗಳು ಜರುಗಲಿವೆ. 25ಕ್ಕೂ ಹೆಚ್ಚು ಜನ ವಿದ್ವಾಂಸರು ಮೊದಲದಿನ ತಮ್ಮ ವಿದ್ವತ್ ಪೂರ್ಣ ಪ್ರಬಂಧಗಳನ್ನು ಮಂಡಿಸಲಿದ್ದಾರೆ.

12 ರಂದು ಎರಡನೆಯ ದಿನ ಹರಿಹರ ಸಭಾಂಗಣದ ನಾಗಾರ್ಜುನ ವೇದಿಕಯೆಲ್ಲಿ ಎರಡು ಗೋಷ್ಠಿಗಳು ಎರಡು ವಿಶೇಷ ಉಪನ್ಯಾಸ ಮತ್ತು ಒಂದು ಕವಿಗೋಷ್ಠಿ ನಡೆಯಲಿದೆ. ಹತ್ತಕ್ಕೂ ಹೆಚ್ಚು ಜನ ವಿದ್ವಾಂಸರು ತಮ್ಮ ವಿದ್ವತ್ ಪೂರ್ಣ ಪ್ರಬಂಧ ಮಂಡಿಸುವರು. ಹತ್ತಕ್ಕೂ ಹೆಚ್ಚು ಕವಿಗಳು ತಮ್ಮ ಕವಿತೆ ವಾಚನ ಮಾಡುವರು. ಅನುಭವ ಮಂಟಪ ಆಮ್ರಪಾಲಿ ವೇದಿಕೆಯಲ್ಲಿ ಎರಡನೆಯ ದಿನ ಎರಡು ಗೋಷ್ಠಿಗಳು ಒಂದು ಬಹÅಭಾಷಾ ಗೋಷ್ಠಿ, ಒಂದು ವಿಶೇಷ ಉಪನ್ಯಾಸ ಒಂದು ಕವಿಗೋಷ್ಠಿ ಜರುಗುವುದು. ಹತ್ತಕ್ಕೂ ಹೆಚ್ಚು ಜನ ಪ್ರಬಂಧ ಮಂಡಿಸುವರು ಹದಿನೈದಕ್ಕೆ ಹೆಚ್ಚು ಜನ ಕವಿತೆ ವಾಚನ ಮಾಡುವರು.

4 ಗಂಟೆಗೆ ಸಮಾರೋಪ ಸಮಾರಂಭ ಜರುಗುವುದು ಡಾ. ಎನ್.ಎಸ್. ತಾರಾನಾಥ ಸಮಾರೋಪ ಭಾಷಣ ಮಾಡುವರು. ಡಾ. ಆರ್. ಶೇಷಶಾಸ್ತ್ರಿ ಮುಖ್ಯ ಅಥಿತಿಗಳಾಗಿ ಭಾಗವಹಿಸುವರು. ಡಾ. ವಿಠ್ಠಲ ದೊಡಮನಿ ಡಾ. ಸುರೇಶ ಬಡಿಗೇರ ಉಪಸ್ಥಿತರಿರುವರು. ಡಾ. ಕೆ. ವಿಜಕಯಮಾರ ಅಧ್ಯಕ್ಷತೆವಹಿಸುವರು  ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here