ಕಲಬುರಗಿಯಲ್ಲಿ ಕಾರ್ಪೆಂಟರ್ ಓರ್ವನ ಹತ್ಯೆ

0
201

ಕಲಬುರಗಿ: ನಗರದ ಗೇಸುದರಾಜ್ ಕಾಲೋನಿಯ ಜವಾರೆಹಿಂದ್ ಶಾಲೆ ಹತ್ತಿರ ವ್ಯಕ್ತಿ ಓರ್ವನನ್ನು ಕೊಲೆ ಮಾಡಿರುವ ಘಟನೆ ಇಂದು ಸಂಜೆ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಜಾವಾರೆಹಿಂದ್ ನಿವಾಸಿ ಅಕ್ರಮ್ (28) ಕೊಲೆಯಾದ ದುರ್ದೈವಿ, ಅಕ್ರಮ್ ಪ್ರೋಫೆಷನಲ್ ಫರ್ನಿಚರ್ ಎಂಬ ಅಂಗಡಿಯಲ್ಲಿ ಕಾರ್ಪೆಂಟರ್ ಕೆಲಸ ಮಾಡುತಿದ್ದು, ಇಂದು ಸಂಜೆ ಸುಮಾರ 5.30ಕ್ಕೆ ಕೆಲವರು ಬೈಕ್ ಮೇಲೆ  ಅಕ್ರಮ್ ಮನೆಗೆ ಆಗಮಿಸಿ ಕ್ರಿಕೆಟ್ ಸ್ಟೆಂಪ್ ಹಾಗೂ ತೆಲೆಗೆ ದೊಣ್ಣೆಯಿಂದ ಹೊಡೆದ್ದು, ನಂತರ ಮಾರಾಕಾಸ್ತ್ರದಿಂದ ಚುಚ್ಚಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಪಿ.ಎಸ್.ಐ ಅಸ್ಲಮ್ ಬಾಷಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದು, ಹಳೆ ವೈಷ್ಯಮ್ಯದ ಹಿನ್ನೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಕೊಲೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಕೊಲೆ ನಂತರ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಸಾರ್ವಜನಿಕರು ಭಾರಿ ಸಂಖ್ಯೆಯಲ್ಲಿ ಜಾಮಾಯಿಸಿದ್ದು, ಬಡವಾಣೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here