ಬಿ.ಬಿ. ಪಾಟೀಲರ ಪುಣ್ಯ ಸ್ಮರಣೆ ನಿಮಿತ್ತ ‘ವಚನ ಹೃದಯ’ ಕೃತಿ ಬಿಡುಗಡೆ ನಾಳೆ

0
120

ಕಲಬುರಗಿ: ಲೋಕೋಪಯೋಗಿ ಇಲಾಖೆಯ ನಿವೃತ್ತ ಅಧಿಕಾರಿ ಕುಳೇಕುಮಟಗಿಯ ಲಿಂ. ಬಿ.ಬಿ. ಪಾಟೀಲ ಅವರ ಪ್ರಥಮ ಪುಣ್ಯ ಸ್ಮರಣೆ ಕಾರ್ಯಕ್ರಮ ಶರಣ ಸಾಹಿತಿ ಶಿವರಂಜನ್ ಸತ್ಯಂಪೇಟೆ ಬರೆದ ‘ವಚನ ಹೃದಯ’ ಕೃತಿ ಲೋಕಾರ್ಪಣೆ ಹಾಗೂ ಕಾಯಕಜೀವಿಗಳಿಗೆ ಸನ್ಮಾನ ಕಾರ್ಯಕ್ರಮ  ಮಾರ್ಚ್ ೧೧ ರಂದು ಬೆಳಗ್ಗೆ 11.30ಕ್ಕೆ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು  ಶೋಭಾ ಡಾ. ಬಾಬುರಾವ ಶೇರಿಕಾರ, ಡಾ. ಗೀತಾ ಡಾ.  ಬಸವಂತರಾವ ಪಾಟೀಲ ತಿಳಿಸಿದ್ದಾರೆ.

ಮಾಜಿ ಸಚಿವ ಎಸ್.ಕೆ. ಕಾಂತಾ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಶಿವರಂಜನ್ ಸತ್ಯಂಪೇಟೆ ಅವರು ಬರೆದ ‘ವಚನ ಹೃದಯ’ ಕೃತಿ ಲೋಕಾರ್ಪಣೆ ಮಾಡುವರು.

Contact Your\'s Advertisement; 9902492681

ಬಿಜೆಪಿ ಯುವ ಮುಖಂಡ ಚಂದು ಪಾಟೀಲ,ಮಹಾನಗರ ಪಾಲಿಕೆ ಸದಸ್ಯ ಶಿವಾನಂದ ಪಾಟೀಲ ಅಷ್ಟಗಿ, ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ ಮಳಖೇಡ, ಸಮಾಜ ಸೇವಕ ಹಣಮಂತ ಪೂಜಾರಿ, ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ  ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಬಿ.ಬಿ. ಪಾಟೀಲರ ಪತ್ನಿ ಇಂದಿರಾ ಬಿ. ಪಾಟೀಲ ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ. ಮಾಜಿ ಶಾಸಕಿ ಅರುಣಾದೇವಿ ಸಿ. ಪಾಟೀಲ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಇದೇವೇಳೆಯಲ್ಲಿ ಅಂಬಾರಾಯ ಮಡಿವಾಳ, ಶ್ರೀಶೈಲ ಪಾಟೀಲ, ಚಂದ್ರಕಾಂತ ಹೆಡೆ, ರಾಧಾ ಸುರೇಶ, ಉಮೇಶ ಗೋಡಬೋಲೆ, ಲಕ್ಷ್ಮೀ ಸಂಗೋಳ್ಳಿ, ಶಿವಾನಂದ ಬಿರಾದಾರ, ಬಾಬುರಾವ ಜನವಾಡೆ, ಖ್ವಾಜಾ ಮೈನುದ್ದೀನ್, ಜಗದೀಶ ಗಾಜರೆ ಇತರರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here