ಕೊರೋನಾ ಬೇಜವಾಬ್ದಾರಿ ಬೇಡ : ಗುರು ಕಾಮಾ

0
55

ಶಹಾಪುರ : ಕೊರೊನಾ ಮಹಾಮಾರಿ ಬಗ್ಗೆ ನಿರ್ಲಕ್ಷ್ಯ ವಹಿಸದೆ.ಪ್ರತಿಯೊಬ್ಬರು ಸುರಕ್ಷಿತ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಈ ರೋಗದಿಂದ ಪಾರಾಗ ಬೇಕಾಗಿದೆ ಎಂದು ಬಿಜೆಪಿಯ ಯುವ ಮುಖಂಡರಾದ ಗುರು ಕಾಮಾ ಅವರು ಸಲಹೆ ನೀಡಿದರು.

ಇಂದು ನಗರದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದ ಮುಂದೆ ಹಮ್ಮಿಕೊಂಡಿರುವ ಕೋರೊನಾ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಇನ್ನೂ ಸ್ವಲ್ಪ ದಿನಗಳವರೆಗೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಂಡು ದಿನದ ವಹಿವಾಟು ನಡೆಸಬೇಕಾಗಿದೆ.ಗುಂಪಾಗಿ ಸೇರುವುದು,ಹಸ್ತಲಾಘವ ಮಾಡುವುದು,ಅನವಶ್ಯಕವಾಗಿ ಮನೆಯಿಂದ ಹೊರಗಡೆ ಬರುವುದನ್ನು ನಾವು ನೀವೆಲ್ಲರೂ ಅರಿತುಕೊಂಡು ತಡೆಗಟ್ಟಬೇಕಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿಯ ಯುವ ಮುಖಂಡರಾದ ರಾಜುಗೌಡ ಉಕ್ಕಿನಾಳ, ಮಲ್ಲಿಕಾರ್ಜುನ ಉಳ್ಳಿ, ಸುಧೀರ್ ಚಿಂಚೋಳಿ,ಹಾಗೂ ಇತರರು ಪಕ್ಷದ ಕಾರ್ಯಕರ್ತ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here