ನದಿ ಪ್ರವಾಹದಿಂದ ಗುಡ್ಡದಲ್ಲಿ ಸಿಲುಕಿದ್ದ ಕುರಿಗಾಹಿ ರಕ್ಷಿಸಿದ ಎನ್‌ಡಿಆರ್‌ಎಫ್ ತಂಡ

0
44

ಸುರಪುರ: ಹುಣಸಗಿ ತಾಲೂಕಿನ ನಾರಾಯಣಪುರ ಸಮೀಪದ ಛಾಯಾ ಭಗವತಿ ದೇವಸ್ಥಾನದ ಬಳಿಯ ಗುಡ್ಡದಲ್ಲಿ ಕುರಿ ಮೇಯಿಸಲು ಹೋಗಿ ಕೃಷ್ಣಾ ನದಿ ಪ್ರವಾಹದಿಂದ ಕಳೆದ ಐದು ದಿನಗಳಿಂದ ಗುಡ್ಡದಲ್ಲಿಯೇ ಕಾಲಕಳೆದಿದ್ದ ಕುರಿಗಾಹಿಯನ್ನು ಎನ್‌ಡಿಆರ್‌ಎಫ್ ತಂಡ ರಕ್ಷಿಸಿದ ಘಟನೆ ನಡೆದಿದೆ.

ಕುರಿಗಾಹಿ ಟೋಪಣ್ಣ ಎನ್ನುವವರು ಕುರಿ ಮೇಯಿಸಲು ಗುಡ್ಡದಲ್ಲಿ ಹೋದಾಗ ಪ್ರವಾಹ ಬಂದಿದ್ದರಿಂದ ಗುಡ್ಡದ ಸುತ್ತಲು ನೀರು ಸುತ್ತುವರೆದಿದ್ದು ಆಚೆ ಬರಲಾಗದೆ ಕಳೆದ ಐದು ದಿನಗಳಿಂದ ಗುಡ್ಡದಲ್ಲಿ ಸಿಲುಕಿದ್ದ.ಈ ಸುದ್ದಿ ತಿಳಿದು ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರ ಸುಪುತ್ರ ಮಣಿಕಂಠಗೌಡ ಛಾಯಾ ಭಗವತಿ ದೇವಸ್ಥಾನದ ಬಳಿಯಿಂದ ಡ್ರೋಣ್ ಕ್ಯಾಮರಾ ಬಳಸಿ ಗುಡ್ಡದಲ್ಲಿ ಕುರಿಗಾಹಿ ಇರುವುದನ್ನು ಶನಿವಾರ ಪತ್ತೆ ಹಚ್ಚಲಾಗಿತ್ತು.

Contact Your\'s Advertisement; 9902492681

ನಂತರ ಶಾಸಕ ರಾಜುಗೌಡ ಕಾಳಜಿವಹಿಸಿ ಎನ್‌ಡಿಆರ್‌ಎಫ್ ತಂಡವನ್ನು ತರಿಸಿ ರವಿವಾರ ಮುಂಜಾನೆ ಹನ್ನೊಂದು ಗಂಟೆಯ ವೇಳೆಗೆ ಕುರಿಗಾಹಿಯನ್ನು ಕರೆತರುವ ಕಾರ್ಯಾಚರಣೆ ಆರಂಭಿಸಲಾಗಿತ್ತು.ಅದರಂತೆ ಎನ್‌ಡಿಆರ್‌ಎಫ್ ತಂಡ ಗುಡ್ಡದಲ್ಲಿದ್ದ ಕುರಿಗಾಹಿ ಟೋಪಣ್ಣನನ್ನು ಕರೆತರಲು ಹೋಗಿತ್ತು.ಆದರೆ ೨೦೦ಕ್ಕೂ ಹೆಚ್ಚಿನ ಕುರಿಗಳನ್ನು ಬಿಟ್ಟು ಬರಲು ಟೋಪಣ್ಣ ಒಪ್ಪದಿದ್ದಾಗ ತಂಡ ಹೇಗೊ ಮನವೊಲಿಸಿ ಟೋಪಣ್ಣ ಹಾಗು ಜೊತೆಯಲ್ಲಿದ್ದ ಶ್ವಾನವನ್ನು ಕರೆತರಲಾಯಿತು.

ಕುರಿಗಾಹಿ ಟೋಪಣ್ಣನನ್ನು ಕರೆತರುತ್ತಿದ್ದಂತೆ ಜನರಲ್ಲಿ ಹರ್ಷ ಉಕ್ಕಿಬಂತು.ಎಲ್ಲರು ಎನ್‌ಡಿಆರ್‌ಎಫ್ ತಂಡದ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ಜಯಕಾರ ಹಾಕಿದರು.ನಂತರ ಶಾಸಕ ರಾಜುಗೌಡ ಎಲ್ಲಾ ಎನ್‌ಡಿಆರ್‌ಎಫ್ ತಂಡದ ಸದಸ್ಯರಿಗೆ ಹೂಮಾಲೆ ಹಾಕಿ ಸನ್ಮಾನಿಸಿ ಗೌರವಿಸಿ ಕೃತಜ್ಞತೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಡ್ರೋಣ್ ಕ್ಯಾಮರಾ ಮೂಲಕ ಕುರಿಹಾಗಿಯನ್ನು ಪತ್ತೆ ಹಚ್ಚಿದ ಶಾಸಕರ ಸುಪುತ್ರ ಮಣಿಕಂಠಗೌಡನ ಶ್ರಮಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು ತಾಲೂಕು ಪಂಚಾಯತಿ ಇಒ ಅಂಬ್ರೇಶ ಹಾಗು ಪೊಲೀಸ್ ಅಧಿಕಾರಿಗಳು ಸೇರಿದಂತೆ ಅನೇಕರಿದ್ದರು.ಇಡೀ ರಾಜ್ಯದ ಜನರ ಗಮನ ಸೆಳೆದಿದ್ದ ಕುರಿಗಾಹಿಯ ಸಂಗತಿ ಭಾನುವಾರ ಸುಖಾಂತ್ಯ ಕಂಡಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here