ಅಗಲಿದ ಸಾಹಿತ್ಯ ದಿಗ್ಗಜರಿಗೆ, ಶಹಾಪುರ ಕಸಾಪ ನುಡಿ ನಮನ

0
73

ಶಹಾಪುರ:  ತಮ್ಮ ಆಲೋಚನಾ ಕ್ರಮ,ವೈಚಾರಿಕತೆಯ ಚಿಂತನೆಗಳು ಹಾಗೂ ಬರಹಗಳ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದಿ ಕಲೆ,ಸಾಹಿತ್ಯ,ಸಂಸ್ಕೃತಿ ಶ್ರೀಮಂತಗೊಳಿಸಿ ಇತ್ತೀಚೆಗೆ ನಮ್ಮಿಂದ ಅಗಲಿದ ದಿಗ್ಗಜರನು ಕಳೆದುಕೊಂಡು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೇಗುಂದಿ ಹೇಳಿದರು.

ನಗರದ ದೇಶಮುಖ್ ಬಡಾವಣೆಯಲ್ಲಿರುವ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಇತ್ತೀಚೆಗೆ ಅಗಲಿದ,ಕಲಬುರಗಿಯ ಸಾಹಿತ್ಯ ದಿಗ್ಗಜರಾದ ಶ್ರೀಮತಿ ಗೀತಾ ನಾಗಭೂಷಣ ಸುರಪುರದ ಎ.ಕೃಷ್ಣ ಮಾಜಿ ಸಚಿವ ಹಾಗೂ ಸಾಂಸ್ಕೃತಿಕ ಲೋಕದ ರಾಯಭಾರಿ ರಾಜಾ ಮದನಗೋಪಾಲ ನಾಯಕ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಖ್ಯಾತ ಕಥೆಗಾರರು ಹಾಗೂ ಹಿರಿಯ ಸಾಹಿತಿಗಳಾದ ಸಿದ್ದರಾಮ ಹೊನ್ಕಲ್ ಮಾತನಾಡಿ ಗೀತಾ ನಾಗಭೂಷಣ್ ಅವರ ಸಾಹಿತ್ಯ ಶ್ರೇಷ್ಠವಾದದ್ದು,ಕಿತ್ತು ತಿನ್ನುವ ಬಡತನ,ಅಸಹಾಯಕತೆ,ಹೆಣ್ಣಿನ ಶೋಷಣೆಯ ಕುರಿತು ಧ್ವನಿ ಎತ್ತಿದ್ದರು ಹಾಗೂ ಸಮಾಜದ ಕುರಿತು ಅಪಾರ ಕಾಳಜಿ ಹೊಂದಿದ್ದು ತಮ್ಮ ಹೋರಾಟ ಮನೋಭಾವ ಹಾಗೂ ಬರವಣಿಗೆಯ ಮೂಲಕ ಸಮಾಜಕ್ಕೆ ಬೆಳಕು ಚೆಲ್ಲಿ ದವರಲ್ಲಿ ಇವರು ಪ್ರಮುಖರು ಎಂದು ಹೇಳಿದರು.

ಕನ್ನಡ ಪಂಡಿತರು ಹಾಗೂ ಹಿರಿಯ ಸಾಹಿತಿಗಳಾದ ಡಾ: ಅಬ್ದುಲ್ ಕರೀಂ ಕನ್ಯಾಕೊಳುರು ಮಾತನಾಡಿ ಎ.ಕೃಷ್ಣ ಅವರು ಬಹಳ ಮೃದು ಸ್ವಭಾವದ ಹಿರಿಯ ಸಾಹಿತಿಗಳ ಲ್ಲೊಬ್ಬರಾಗಿದ್ದುರು.ಅಲ್ಲದೆ ಅಪಾರ ಶಿಷ್ಯಂದಿರ ಬಳಗವೇ ಹೊಂದಿದ್ದರು,ಇವರು ಷಟ್ಪದಿ, ರಗಳೆ,ಕಂದಪದ್ಯ,ಚಂಪೂಕಾವ್ಯ, ಹೀಗೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿ ಈ ನಾಡಿಗೆ ನೀಡಿದ್ದಾರೆ ಎಂದು ಹೇಳಿದರು.

ಪ್ರಗತಿಪರ ಚಿಂತಕ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿ ರಾಜಾ ಮದನ ಗೋಪಾಲ ನಾಯಕ್ ಅವರು ರಾಜಕಾರಣಿಯಾಗಿದ್ದರೂ ಕೂಡ ಸಾಮಾನ್ಯ ಜನರೊಂದಿಗೆ ಸರಳತೆಯಿಂದ ಬೆರೆಯುತ್ತಿದ್ದರು ಇವರಗೆ ಕಲೆ,ಸಾಹಿತ್ಯ,ಸಂಗೀತ ಎಂದರೆ ಪಂಚಪ್ರಾಣ ಇವರು ಸದಾ ಪ್ರೋತ್ಸಾಹಕರಾಗಿ ಎಲ್ಲರನ್ನೂ ಗುರುತಿಸಿ ಗೌರವಿಸುವ ಗುಣ ಹೊಂದಿದ್ದರೂ ಇಂಥ ವ್ಯಕ್ತಿಗಳು ನಾಡಿನಲ್ಲಿ ದೊರೆಯುವುದು ಅಪರೂಪ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಶಿವಣ್ಣ ಇಜೇರಿ, ಗುರುಬಸಯ್ಯ ಗದ್ದುಗೆ,ಡಾ: ಮೊನಪ್ಪ ಶಿರವಾಳ,ನೀಲಕಂಠ ಬಡಿಗೇರ್,ಸಾಯಬಣ್ಣ ಮಡಿವಾಳಕರ್,ಶಿವಶರಣಪ್ಪ ಕಾಮಾ ಸಣ್ಣ ನಿಂಗಣ್ಣ ನಾಯ್ಕೋಡಿ,ದೇವಿಂದ್ರಪ್ಪ ಕನ್ಯಾಕೋಳೂರ,ಅಕ್ಬರ್ ಹೊಟಗಿ,ಗೌರವ ಕಾರ್ಯದರ್ಶಿಗಳಾದ ಬಸವರಾಜ ಸಿನ್ನೂರು, ಪಂಚಾಕ್ಷರಿ ಹಿರೇಮಠ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here