ಕರ್ನಾಟಕ ಹಿಂದಿ ಸಾಹಿತ್ಯ ಭಾರತೀಯ ಕಾರ್ಯಕಾರಿಣಿ ಸಮಿತಿಗೆ ನೇಮಕ

1
32

ಕಲಬುರಗಿ: ಭಾರತದಲ್ಲಿ ಹಿಂದಿಯ ಭಾಷಾಭಿಮಾನ ಹೆಚ್ಚಿಸುವುದು ಮತ್ತು ವಿಶ್ವದಲ್ಲಿ ಹಿಂದಿಯ ಸ್ಥಾನ ಮಾನ ಬೆಳೆಸುವ ಸಲುವಾಗಿ ಹಿಂದಿ ಸಾಹೀತ್ಯ ಭಾರತಿ ಘಟಕವನ್ನು ಕರ್ನಾಟಕ ರಾಜ್ಯದಲ್ಲಿ  ಸ್ಥಾಪಿಸಲಾಗಿದೆ ಎಂದು ರಾಷ್ಟ್ರೀಯ ಅಧ್ಯಕ್ಷರಾದ ಡಾ. ರವೀಂದ್ರ ಶುಕ್ಲ, ಮಾಜಿ ಶಿಕ್ಷಣ ಸಚಿವರು, ಉತ್ತರ ಪ್ರದೇಶ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ಹಿಂದಿ ಸಾಹಿತ್ಯ ಭಾರತಿ ಕರ್ನಾಟಕ ಘಟಕದ ಸ್ಥಾಪನೇಯ ಸಂದರ್ಭದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ (ಗುಲಬರ್ಗಾ) ಯ ಹಿಂದಿ ಪ್ರಾಧ್ಯಾಪಕರು ಮತ್ತು ಯುವ ಲೇಖಕರಾದ ಡಾ. ಗಣೇಶ ಪವಾರ ಅವರಿಗೆ ಅಧ್ಯಕ್ಷರನ್ನಾಗಿ ನೆಮಕ ಮಾಡತಾಗಿದೆ ಎಂದು ತಿಳಿಸಿದರು. ಉಪಾಧ್ಯಕ್ಷರಾಗಿ ಡಾ. ಸುರೇಖಾ ಮಲಗಿ ಬೆಂಗಳೂರು,  ಗಜೇಸಿಂಗ ಕಲಬುರಗಿ, ಡಾ. ಶಂಕರ ರಾಠೋಡ ಬೆಳಗಾವಿ, ಡಾ. ಪಿ. ಡಿ. ಧರ ಬೆಂಗಳೂರು, ಡಾ. ಲತೀಫ ಅಹಮದ ಬೆಂಗಳೂರು ಅವರನ್ನು ಆಯ್ಕೆ ಮಾಡಲಾಗಿದೆ. ಮುಖ್ಯ ಕಾರ್ಯದರ್ಶಿಯಾಗಿ ಡಾ. ಮಹೇಂದ್ರ ಕುಮಾರ ಬೆಂಗಳೂರು. ಮುಖ್ಯ ಕಾರ್ಯದರ್ಶಿ ಸಂಘಟಕರಾಗಿ ಡಾ. ಬಿ. ಎಲ್. ಗುಂಡೂರ ಧಾರವಾಡ ಅವರನ್ನು ಆಯ್ಕೆ ಮಾಡಲಾಗಿದೆ.

Contact Your\'s Advertisement; 9902492681

ಸಂಯುಕ್ತ ಕಾರ್ಯದರ್ಶಿಯಾಗಿ ಡಾ. ಶಂಕರ ತೇರದಾಳ, ಗೋಕಾಕ ಬೆಳಗಾವಿ, ಡಾ. ಸುನೀತಾ ವಿವೇಕ ಬೆಂಗಳೂರು ಅವರನ್ನು ಆಯ್ಕೆ ಮಾಡಲಾಗಿದೆ. ಖಜಾಂಚಿಯಾಗಿ ಡಾ. ಸುಪ್ರೀಯಾ ಸಿಂಗ ಬೆಂಗಳೂರು ಅವರನ್ನು ಆಯ್ಕೆ ಮಾಡಲಾಗಿದೆ. ಪತ್ರಿಕಾ ಸಂಯೋಜಕರಾಗಿ  ಪ್ರತೀಕ ಪಲೋಡ ಬೆಂಗಳೂರು ಮತ್ತು ಮಿಡಿಯಾ ಸಹ ಸಂಯೋಜಕರಾಗಿ ಡಾ. ನಿತಿನ ಪಾಟೀಲ ಬೆಂಗಳೂರು ಅವರನ್ನು ನೆಮಕ ಮಾಡಲಾಗಿದೆ. ಸಚಿವರಾಗಿ ಡಾ. ಶಿವಾನಂದ ಕೋಳಿ ಕಾರವಾರ, ಡಾ. ಸುವರ್ಣಾ ಕೆ. ಬೆಂಗಳೂರು,  ಲಾಲ ಜೋಶಿ ಮೈಸೂರು, ಡಾ. ಕಿರಣ ಕಾಮಾಜಿ ಬೆಂಗಳೂರು, ಡಾ. ನರಸಿಂಹಮೂರ್ತಿ ದೋಡ್ಡ ಬಳ್ಳಾಪೂರ, ಡಾ. ರಿಯಾಜ ಬೆಂಗಳೂರು ಅವರು ನೆಮಕ ರಾಗಿದ್ದಾರೆ. ಡಾ. ತಾರಾ ನಾಯರ, ಡಾ. ಮುಜಾವರ ಜೈನು, ಡಾ. ರೇಖಾ ಮೆನನ, ಡಾ. ನಿಶಾ ಮೆಶ್ರಾಮ ಬೆಂಗಳೂರು, ಪ್ರೋ. ತಿಜಾ, ಡಾ. ಅತುಲ ಪಾಂಡೆ, ಪ್ರೋ. ವೆದಾ ಕೆಸರಕರ, ಪ್ರೋ. ದಿಲೀಪ ಯಾದವ, ಪ್ರೋ. ಮಾಧೂರಿ, ಡಾ. ಅನಘಾ ಅವರನ್ನು ಸದಸ್ಯರನ್ನಾಗಿ ನೆಮಕ ಮಾಡಲಾಗಿದೆ ಎಂದು ಡಾ. ರವೀಂದ್ರ ಶುಕ್ಲ ಅವರು ಪ್ರಕಟನೆಯಲ್ಲಿ ತಿಳಿಸಿದರು.

ಹಿಂದಿ ಸಾಹಿತ್ಯ ಭಾರತಿ ಕರ್ನಾಟಕ ಘಟಕದ ಪ್ರಥಮ ಅಧ್ಯಕ್ಷರಾಗಿ ನೇಮಕರಾದ ಪ್ರೋ. ಗಣೇಶ ಪವಾರ ಅವರು ಹಿಂದಿ ಸಾಹೀತ್ಯ ಭಾರತಿ ಬಹಳ ಬೇಗ ಅಂತರರಾಷ್ಟ್ರೀಯ ಸ್ಥಾನಮಾನ ಪಡೆದುಕೋಳ್ಳಲಿದೆ ಎಂದು ಪ್ರಕಟಣೆಯಲ್ಲಿ ಹೆಳಿದರು. ಮತ್ತು ಆದಷ್ಟು ಬೇಗ ಕರ್ನಾಟಕ ರಾಜ್ಯದ ಜಿಲ್ಲಾ ಮತ್ತು ತಾಲೂಕುವಾರು ಸಮಿತಿಯ ನೆಮಕ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ಹೆಳಿದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here