ಸರಕಾರಿ ನೌಕರರ ದಿನಾಚರಣೆಗೆ ಸಿಎಂ ಆದೇಶಿಸಿರುವುದಕ್ಕೆ ಹರ್ಷ

0
117

ಶಹಾಬಾದ:ಸರಕಾರಿ ನೌಕರರ ದಿನಾಚರಣೆ ಮಾಡಲು ನಿರ್ಧರಿಸಿದ ಸರಕಾರದ ಕ್ರಮಕ್ಕೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಶಹಾಬಾದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ ಹರ್ಷ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು ಮುಖ್ಯಮಂತ್ರಿಗಳಿಗೆ ವಿನಂತಿಸಿ, ಮನವಿ ಪತ್ರ ಸಲ್ಲಿಸಿದ ಪ್ರಯುಕ್ತ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರತಿವರ್ಷ ಸರಕಾರದಿಂದ ಎಲ್ಲಾ ಸರಕಾರಿ ಅಧಿಕಾರಿ, ನೌಕರರನ್ನು ಒಳಗೊಂಡಂತೆ ಸರಕಾರಿ ನೌಕರರ ದಿನ ಆಚರಣೆ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಆದಷ್ಟು ಬೇಗನೆ ಮಾಡಲು ಸರಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ. ಸಿಎಂ ಅವರ ಕ್ರಮವನ್ನು ಸ್ವಾಗತಿಸುತ್ತೆವೆ ಎಂದು ಈರಣ್ಣ ತಿಳಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here