ನೀರಿನ ಸಮಸ್ಯೆಗೆ ಸ್ಪಂದಿಸಲು ವಿದ್ಯಾನಗರ ವೆಲ್ ಫೇರ್ ಸೊಸೈಟಿ ಮನವಿ

0
94

ಕಲಬುರಗಿ: ನೀರಿನ ಸಮಸ್ಯೆ ಕುರಿತು ನಗರದ ನೀರು ಸರಬರಾಜು ಇಲಾಖೆಯಲ್ಲಿ ಅನೇಕ ಬಾರಿ ಮನವಿ ಮಾಡಿಕೊಂಡರು ಬಹುತೇಕ ಅಧಿಕಾರಿಗಳು ಇನಚಾರ್ಜ ಮೇಲೆ ಇರುವ ಎ.ಇ J.E., AEE ಮತ್ತು EE ಅಧಿಕಾರಿಗಳು ಯಾವುದೇ ರೀತಿಯಾಗಿ ಸಮಸ್ಯೆ ಸ್ಪಂದಿಸುತ್ತಿಲ್ಲ ಎಂದು ವಿದ್ಯಾನಗರ ವೆಲ್ ಫೇರ್ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಅವರು ತಮ್ಮ ಪ್ರಕಟಣೆಯಲ್ಲಿ ಆರೋಪಿಸಿದರು.

Contact Your\'s Advertisement; 9902492681

ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಬರುವ ವಾರ್ಡ ನಂ. 45 ರಲ್ಲಿ ಇರುವ ವಿದ್ಯಾನಗರ ಕಾಲೋನಿಯಲ್ಲಿ ಸುಮಾರು 100 ಕ್ಕಿಂತಲು ಹೆಚ್ಚು ಮನೆಗಳಿವೆ, ಕೆಲವು ತಿಂಗಳ ಹಿಂದೆ 3-4 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿತ್ತು. ಈಗ ಸುಮಾರು 1 ತಿಂಗಳಿನಿಂದ 8-10 ದಿನಗಳಿಗೊಮ್ಮೆಯಾದರೂ ಸರಿಯಾಗಿ ನೀರು ಬರುತ್ತಿಲ್ಲ.  ಕಾರಣ ಕೇಳಿದರೆ ನೀರು ಸರಬರಾಜು ಮಾಡುವವರು ಮೈಬೂಬ ನಗರದಲ್ಲಿರುವ ನೀರಿನ ಟ್ಯಾಂಕ್ ಪೂರ್ಣ ಪ್ರಮಾಣದಲ್ಲಿ ತುಂಬದೆ ಇರುವ ಕಾರಣಕ್ಕೆ ಈ ರೀತಿ ಸರಬರಾಜಿನಲ್ಲಿ ತೊಂದರೆಯಾಗುತ್ತಿದೆ ಎಂದು ಸಿಬ್ಬಂದಿಗಳು ಹೇಳುತ್ತಿದ್ದಾರೆ.

ವಿದ್ಯಾನಗರ ಕಾಲೋನಿ ಕೇವಲ ನೀರು ಸರಬರಾಜು ಇಲಾಖೆ ವ್ಯವಸ್ಥೆ ಮೇಲೆ ಅವಲಂಭಿತವಿದ್ದು, ಒಂದು ವೇಳೆ ನೀರು ಬರದೇ ಇದ್ದರೆ ಬಡೇಪೂರ ಕಾಲೋನಿ ಮತ್ತು ಆದೇಶ ನಗರದಲ್ಲಿರುವ ಸರ್ಕಾರಿ ಬೋರವೆಲ್‌ಗಳಿಗೆ ಮೋರೆ ಹೋಗಿ ದ್ವಿಚಕ್ರ, ಆಟೋ, ಕಾರಿನ ಮತ್ತು ಮಿನಿ ಲಾರಿ ಮೂಲಕ ನೀರು ತಂದು ಬಳಕೆ ಮಾಡುತ್ತಿದ್ದೇವೆ.

ಆದ್ದರಿಂದ ಮೈಬೂಬ ನಗರ ನೀರಿನ ಟ್ಯಾಂಕನ್ ಕನೆಕ್ಷನ್ ಬದಲಾಯಿಸಿ ಅದಕ್ಕಿಂತ ಸಮೀಪ ಇರುವ ನೀರಿನ ಟ್ಯಾಂಕಿನಿಂದ ನೀರು ಸರಬರಾಜು ಮಾಡುವಂತೆ ಮಾಡಬೇಕು. 15 ದಿನದೊಳಗಡೆ ನೀರು ಸರಬರಾಜು ವ್ಯವಸ್ಥೆ ಮಾಡದಿದ್ದರೆ ಬಡಾವಣೆ ಸದಸ್ಯರು ರಸ್ತಾ ರೋಖೋ ಮಾಡುವಂತಹ ಅಥವಾ ನಿಮ್ಮ ಕಚೇರಿಯ ಎದುರುಗಡೆ ಧರಣಿ ಕೂಡುವಂತಹ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ವಿದ್ಯಾನಗರ ವೆಲೆಫೇರ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರಾದ ಬಸವಂತರಾವ ಜಾಬಶೆಟ್ಟಿ, ಮಲ್ಲಿಕಾರ್ಜುನ ನಾಗಶೆಟ್ಟಿ, ಕಾಶಿನಾಥ ಚಿನ್ನಮಳ್ಳಿ, ಶಾಂತಯ್ಯ ಬಿದಿಮನಿ, ಸುಭಾಷ ಮಂಠಾಳೆ, ನಾಗರಾಜ ಹೆಬ್ಬಾಳ, ಕರಣ ಆಂದೋಲಾ, ಅಮೀತ ಸಿಕೇದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here