ಸುರಪುರ: ನಾಡಿನ ಚಿಂತನಶೀಲರ ಬಳಗವಾಗಿರುವ ಕನ್ನಡ ಬಹುತ್ವ ಭೂಮಿಕೆ ಬಳಗಕ್ಕೆ ನೂತನ ನಿರ್ದೇಶಕರನ್ನಾಗಿ ಚಿಂತಕ ಮಹಾಂತೇಶ ಗೋನಾಲ ಅವರನ್ನು ನೇಮಕಗೊಳಿಸಲಾಯಿತು.ನಗರದ ಟೈಲರ್ ಮಂಜಿಲ್ನಲ್ಲಿ ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ಎಲ್ಲ ಮುಖಂಡರು ಒಮ್ಮತದಿಂದ ಸೂಚಿಸಿದರು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಮಹಾಂತೇಶ ಗೋನಾಲ ಒಬ್ಬ ಪ್ರಗತಿಪರ ಹಾಗು ಚಿಂತನಶೀಲ ಯುವಕ ಹಾಗು ವೈಚಾರಿಕತೆಯ ವಾಗ್ಮಿಯಾಗಿದ್ದು ಕನ್ನಡ ಬಹುತ್ವ ಭೂಮಿಕೆಗೆ ಒಬ್ಬ ಸೂಕ್ತ ಹಾಗು ಉತ್ತಮವಾದ ನಿರ್ದೇಶಕರಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಭೂಮಿಕೆಯ ಗೌರವ ನಿರ್ದೇಶಕರನ್ನಾಗಿ ಮಲ್ಲಯ್ಯ ಕಮತಗಿಯವರನ್ನು ಹಾಗು ಸಹ ನಿರ್ದೇಶಕರನ್ನಾಗಿ ಡಾ: ಮಲ್ಲಿಕಾರ್ಜುನ ಕಮತಗಿ ಹಾಗು ಮೂರ್ತೆಪ್ಪ ಬೊಮ್ಮನಹಳ್ಳಿಯವರನ್ನು ನೇಮಿಸಲಾಯಿತು.
ಸಭೆಯಲ್ಲಿ ಬಲಭೀಮ ದೇಸಾಯಿ ಮಲ್ಲಿಕಾರ್ಜುನ ಹಿರೇಮಠ ಕೈದಾಳ ಕೃಷ್ಣಮೂರ್ತಿ ಸಿದ್ದಯ್ಯ ಸ್ಥಾವರಮಠ ಹಣಮಂತ ಚಂದಲಾಪುರ ಅಹ್ಮದ್ ಪಠಾಣ ಮೋನಯ್ಯ ಗೋನಾಲ ಮಲ್ಲು ಮುಷ್ಠಳ್ಳಿ ಮಲ್ಲು ಕೆಸಿಪಿ ಪ್ರಕಾಶ ಮುಷ್ಠಳ್ಳಿ ಮಲ್ಲಿಕಾರ್ಜುನ ಕುಲಕರ್ಣಿ ರಾಘವೇಂದ್ರ ಹಾರಣಗೇರಾ ಸೇರಿದಂತೆ ಇತರರಿದ್ದರು.