ಶ್ರೀ ಪ್ರಭು ಮಹಾವಿದ್ಯಾಲಯದಲ್ಲಿ ಸಹಕಾರ ಸಂಘಗಳ ಮಹತ್ವ ಉಪನ್ಯಾಸ ಕಾರ್ಯಕ್ರಮ

0
18

ಸುರಪುರ: ಕಲಬುರಗಿ – ಯಾದಗಿರಿ ಜಿಲ್ಲೆ ಸಹಕಾರ ಸಂಘ ಮತ್ತು ಶ್ರೀ ಪ್ರಭು ಮಹಾವಿದ್ಯಾಲಯ ನೌಕರರ ಸಹಕಾರ ಸಂಘ, ಸುರಪುರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗಾಗಿ ಸಹಕಾರ ಸಂಘಗಳ ಮಹತ್ವ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕಲಬುರ್ಗಿ ಯಾದಗಿರಿ ಸಹಕಾರ ಸಂಘಗಳ ಅಧಿಕಾರಿಗಳಾದ ರಾಮಚಂದ್ರರವರು ಮಾತನಾಡಿ, ಸಹಕಾರ ಎನ್ನುವ ಪದ ಬದುಕಿನ ಎಲ್ಲ ಹಂತಗಳಲ್ಲಿ ಬೇಕಾಗುವ ಹಾಗೆ ಸಮಾಜದಲ್ಲಿ ಬದುಕಲು ಒಬ್ಬರು ಮತ್ತೊಬ್ಬರ ಮಧ್ಯೆ ಸಹಕಾರ ಬೇಕಾಗುತ್ತದೆ. ಸಹಕಾರ ಸಂಘಗಳ ಮೂಲಕ ಜಾರಿಯಾಗುವ ಕಾರ್ಯಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್.ಎಚ್. ಹೊಸಮನಿ ಮಾತನಾಡಿ, ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು, ಕೇವಲ ಪಠ್ಯಕ್ಕೆ ಸೀಮಿತವಾಗದೇ ಜೀವನಕ್ಕೆ ನೆರೆವಾಗುವ ಹಲವು ಸಂಗತಿಗಳನ್ನು ತಿಳಿದುಕೊಳ್ಳಬೇಕು, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಬೌದ್ಧಿಕ ಉನ್ನತಿಗೆ ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರಾದ ಎಮ್.ಡಿ.ವಾರೀಸ್ ಸಹಕಾರ ಶಿಕ್ಷಕರಾದ ಸುಜಾತಾ ನೌಕರರ ಸಹಕಾರ ಸಂಘದ ಕಾರ್ಯದರ್ಶಿ ಯಲ್ಲಪ್ಪ ಜಹಗೀರದಾರ ಸದಸ್ಯರುಗಳಾದ ಎಸ್.ಎಮ್. ಸಜ್ಜನ, ವೀರಣ್ಣ ಜಾಕಾ, ಮುನೀಶಕುಮಾರ, ಮಲ್ಹಾರಾವ ಕುಲ್ಕರ್ಣಿ, ಡಾ. ಎಸ್.ಎಮ್. ಹುನಗುಂದ, ಡಾ. ಬಾಲರಾಜ ಸರಾಫ್ ಉಪಸ್ಥಿರಿದ್ದರು.

ಅಲ್ಲದೇ ಕಾಲೇಜು ಸಿಬ್ಬಂದಿಗಳಾದ ಜ್ಯೋತಿ ಕಲಾಲ, ಶಿವಲೀಲಾ, ನಮ್ರತಾ, ಹಣಮಂತ ಸಿಂಗೆ, ಡಾ ಉಪೇಂದ್ರ ನಾಯಕ ಸುಬೇದಾರ ಭಾಗವಹಿಸಿದ್ದರು ಉಪನ್ಯಾಸಕ ಸಾಯಿಬಣ್ಣ ಮುಡಬೂಳ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ. ಸುರೇಶ ಮಾಮಡಿ ನಿರೂಪಿಸಿದರು, ಮಂಜುನಾಥ ಚೆಟ್ಟಿ ಸ್ವಾಗತಿಸಿದರು ಜ್ಯೋತಿ ಮಾಮಡಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here