ಅಂಬಲಗಿ ನಿಧನಕ್ಕೆ ಶಾಸಕ ಗುತ್ತೇದಾರ ಸಂತಾಪ

0
237

ಆಳಂದ: ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಹೋರಾಟಗಾರ ಎಂ ಬಿ ಅಂಬಲಗಿ ನಿಧನಕ್ಕೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ತೀವ್ರ ಸಂತಾಪ ಸಂತಾಪ ವ್ಯಕ್ತಪಡಿಸಿದ್ದಾರೆ.

ಎಂ ಬಿ ಅಂಬಲಗಿ ಅವರು ಸರಳ ಸ್ವಭಾವದವರಾಗಿದ್ದು ರಾಜ್ಯದ ಅನೇಕ ಶೈಕ್ಷಣಿಕ ಹೋರಾಟಗಳ ಚಳುವಳಿಯಲ್ಲಿ  ಮುಂಚೂಣಿಯಲ್ಲಿದ್ದು, ಈಶಾನ್ಯ ವಲಯ ಶಿಕ್ಷಕರ ವೇದಿಕೆಯ ಮೂಲಕ ಈ ಭಾಗದ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದರು. ಅವರನ್ನು ಕಳೆದುಕೊಂಡ ಕಲ್ಯಾಣ ಕರ್ನಾಟಕ ಪ್ರದೇಶ ಬಡವಾಗಿದೆ ಎಂದು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ನಿರುದ್ಯೋಗಿಗಳ, ಪದವೀಧರರ ಅನೇಕ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುತ್ತಿದ್ದರು ಹೀಗಾಗಿ ಅವರು ಅನೇಕರ ಪಾಲಿನ ಭರವಸೆಯಾಗಿದ್ದರು ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here