ಇ.ಪಿ.ಎಪ್ ಕಛೇರಿಯಿಂದ ನಿವೃತ್ತಿಯ ದಿನಾಂಕದಂದು ಪಿಂಚಣಿದಾರರಿಗೆ ಪಿಂಚಣಿ ಪಾವತಿ ಆದೇಶ

0
47

ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ ಕಚೇರಿಯಲ್ಲಿ ಡಿ. ಹನುಮಂತಪ್ಪ, ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಶುಕ್ರವಾರ ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಂಚಣಿದಾರರಾದ  ಶಿವನಾಗಪ್ಪ ಬಿರಾದಾರ ಅವರಿಗೆ ನಿವೃತ್ತಿಯ ದಿನಾಂಕದಂದು ಪಿಂಚಣಿ ಪಾವತಿ ಆದೇಶವನ್ನು ನೀಡಿದರು.

ಕಾರ್ಮಿಕರ ಭವಿಷ್ಯ ‌ನಿಧಿ‌ ಸಂಘಟನೆಯು ತನ್ನ ಎಲ್ಲಾ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಂತೆ ನಿವೃತ್ತಿಯಾಗುತ್ತಿರುವ ಭವಿಷ್ಯ ನಿಧಿ ಚಂದಾದಾರರಿಗೆ ಅವರ ನಿವೃತ್ತಿಯ ದಿನಾಂಕದಂದು “ಪ್ರಯಾಸ” ಕಾರ್ಯಕ್ರಮದ ಅಡಿಯಲ್ಲಿ ಪಿಂಚಣಿ‌ ಆದೇಶ ಪತ್ರವನ್ನು ನೀಡಿದರು. ಯೋಜನೆಯ ಹೆಚ್ಚಿನ ಮಾಹಿತಿಗಾಗಿ ಭವಿಷ್ಯ ನಿಧಿ ಕಾರ್ಯಾಲಯಕ್ಕೆ ಸಂಪರ್ಕಿಸಬಹುದು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಸಹಾಯಕ ‌ಭವಿಷ್ಯ‌ ನಿಧಿ ಅಯುಕ್ತ ಸುಪ್ರೀತಿಕ ದಾಶ, ಸಂಜಯ ಬಿರ್ಜೆ, ಅವಿನಾಶಕುಮಾರ ಸಿಂಗ್,  ಜೆ.ಜಾಫರ್, ಎಸ್.‌ಶಿವಾರಾಜ, ಬಸವರಾಜ ಹೆಳವರ, ಟಿ. ಸೋಮಶೇಖರ, ಮುಖೇಶ ಹಾಗೂ ಮೆಂಡೆ ತಿರುಪತಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here