ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆ ಪರಿಹಾರಕ್ಕಾಗಿ ಒಗ್ಗೂಡಿ: ಜಗನ್ನಾಥ ಸೂರ್ಯವಂಶಿ

0
103

ಕಲಬುರಗಿ: ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ಮತ್ತು ಕನ್ನಡಪರ ಹೋರಾಟಗಾರರನ್ನು ಒಗ್ಗೂಡಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ  ಒಕ್ಕೂಟವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ನೂತನ ಅಧ್ಯಕ್ಷ ನಂದಕುಮಾರ ನಾಗಭುಜಂಗೆ ಹಾಗೂ ಗೌರವಾಧ್ಯಕ್ಷ ಜಗನ್ನಾಥ ಸೂರ್ಯವಂಶಿ ಜಂಟಿಯಾಗಿ ತಿಳಿಸಿದರು.

ನಗರದ ಖಾಸಗಿ ಸಭಾಗಂಣದಲ್ಲಿ ರವಿವಾರ ನಡೆದ ಹೋರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತಿನಂತೆ ಆ ಬಲದಿಂದಲೇ ಈ ಭಾಗದಲ್ಲಿ ನಿರಂತರ ಕನ್ನಡದ ಸೇವೆ ಮಾಡುತ್ತೇವೆ ಎಂದರು.

Contact Your\'s Advertisement; 9902492681

ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ. ವಿವಿಧ ಕನ್ನಡಪರ ಸಂಘಟನೆಗಳ ಪ್ರಮುಖರಾದ ಅಮೃತ ಪಾಟೀಲ, ಶಿವಲಿಂಗ ಹಳಿಮನಿ, ದೇವೇಂದ್ರ ದೇಸಾಯಿ ಕಲ್ಲೂರ , ದತ್ತು ಖಾಸಗಿ, ರವಿ ವಂಟಿ, ಸಂದೀಪ್ ಭರಣಿ, ಮಲ್ಲಿಕಾರ್ಜುನ ಸರವಾಡ, ರವಿ ದೇಗಾಂವ, ಮನೋಹರ ಬೀರನೂರ, ಆನಂದ ತೆಗನೂರ, ಮಲ್ಲಿಕಾರ್ಜುನ ಸರಡಗಿ, ಶರಣು ಬಡಿಗೇರ, ಮಲ್ಲಿನಾಥ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here