ಕೃಷ್ಣಮೃಗ ಭೇಟೆ: ಓರ್ವನ ಬಂಧ

0
120

ಕಲಬುರಗಿ: ತಾಲೂಕಿನ ಫಿರೋಜಾಬಾದ ದರ್ಗಾ ಬಳಿ ಅಪರೂಪದ ಕೃಷ್ಣಮೃಗ ಭೇಟೆಯಾಡಿ ಬುಲೆರೊ ವಾಹನದಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡ‌ ಅರಣ್ಯ ಸಂಚಾರಿ ದಳ ಶಹಾಪುರ ತಾಲ್ಲೂಕಿನ ಗಂಗಾನಾಳ ಗ್ರಾಮದ ನಾಗಪ್ಪ ಈಶ್ವರಪ್ಪ ಎಂಬಾತನನ್ನು ಬಂಧಿಸಿ ಕೃಷ್ಣಮೃಗದ ಕಳೆಬರ, ಬುಲೆರೊ ವಾಹನ ಹಾಗೂ ಬೇಟೆಗೆ ಬಳಿಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Contact Your\'s Advertisement; 9902492681

ಈ ಕಾರ್ಯಾಚರಣೆಯು ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿಕಾರಿ ಜಯವರ್ಧನ ತಳವಾರ ನೇತ್ರತ್ವದಲ್ಲಿ ಉಪ ಅರಣ್ಯಾಧಿಕಾರಿ ರೇವಣಸಿದ್ದಪ್ಪ ತಾವರಖೇಡ, ಶರಣಗೌಡ, ವಾಹನ ಚಾಲಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here