ಕ್ರೀಡಾ ತರಬೇತುದಾರರಿಗೆ ಆರ್ಥಿಕ ನೇರವು ನೀಡಿ: ಚವ್ಹಾಣ

0
51

ಕಲಬುರಗಿ: ಮಹಾಮಾರಿ ಕರೋನಾ ವೈರಸ್‌ನಿಂದ ಇಡಿ ದೇಶವೇ ಸಂಕಷ್ಠಕ್ಕೆ ಸಿಲುಕಿದೆ, ಅದರಲ್ಲಿ ಕರಾಟೆ ಹಾಗೂ ಕೆಲವು ಕ್ರೀಡಾ ತರಬೇತುದಾರರ ಜೀವನ ಸಾಗಿಸುವುದಕ್ಕೆ ಕಷ್ಠವಾಗುತ್ತಿದ್ದು ಸರಕಾರವು ಕ್ರೀಡಾ ತರಬೇತುದಾರರಿಗೆ ಆರ್ಥಿಕ ನೇರವಿನ ಪ್ಯಾಕೇಜ್‌ನನ್ನು ಘೋಷಿಸಬೇಕು ಎಂದು ಕರಾಟೆ ತರಬೇತುದಾರ ರಾಜ್‌ವರ್ಧನ್ ಸಿ.ಚವ್ಹಾಣ ಅವರು ಪತ್ರಿಕಾ ಪ್ರಕಟಣೆ ಮೂಲಕ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಕರೋನಾದ ಎರಡನೇ ಅಲೆಯ ತೀವೃತೆಯ ನಡುವೆ ಬಡ ಜನರ ಜೀನವ ಮತ್ತೆ ಮೂರಾಬಟ್ಟೆಯಾಗಿದೆ. ಉದ್ಯೋಗ ಕೈಕೊಟ್ಟಿದೆ. ಕಣ್ಣ ಮುಂದೆ ಹತ್ತಾರು ಕಷ್ಠಗಳ ಸರಮಾಲೆಯೇ ಇದೆ. ಇಂತಹ ಸಂದರ್ಭದಲ್ಲಿ ಲಾಕ್‌ಡೌನ್ ಮಾಡಿರುವುಕ್ಕೆ ನಾವುಗಳು ಪ್ರೋತ್ಸಾಹಿಸುತ್ತೇವೆ.
ಈ ಲಾಕ್‌ಡೌನ್ ಆದಾಗಿನಿಂದಲೂ, ಈಗಾಗಲೇ ಬೀದಿ ಬದಿ ವ್ಯಾಪಾರಿಗಳು, ಕೂಲಿಕಾರ್ಮಿಕರು, ಕಲಾವಿದರು ಕಟ್ಟಡ ಕಾರ್ಮಿಕರಿಗೆ ಸರಕಾರವು ಪರಿಹಾರ ಘೋಷಣೆ ಮಾಡಿದೆ.

Contact Your\'s Advertisement; 9902492681

ಆದರೆ ಕರಾಟೆ, ಕೆಲವು ಕ್ರೀಡಾ ತರಬೇತುದಾರರುಗಳಿಗೆ ಯಾವುದೇ ರೀತಿಯ ಪರಿಹಾರವನ್ನು ಇಲ್ಲಿಯ ವರೆಗೆ ಘೋಷಣೆ ಮಾಡಿಲ್ಲ ಆದ್ದರಿಂದ ಕರಾಟೆ ಹಾಗೂ ಕ್ರೀಡಾ ತರಬೇತುದಾರರಿಗೆ ಪರಿಹಾರವನ್ನು ಘೋಷಣೆ ಮಾಡಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here