ಅನಾಥ ಮಕ್ಕಳ ಶಿಕ್ಷಣ, ಉದ್ಯೋಗ ,ಮದುವೆ ಜವಾಬ್ದಾರಿ ಹೊತ್ತ ಬಾಲರಾಜ್ ಗುತ್ತೇದಾರ

0
41

ಚಿಂಚೋಳಿ:  ತಾಲೂಕಿನ ಸೇಡಂ ಮತಕ್ಷೇತ್ರದ ಬೆಡಕಪಳ್ಳಿ ಗ್ರಾಮದಲ್ಲಿ ವಾರದಲ್ಲಿ ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳಿಗೆ ಸೇಡಂ ಜೆಡಿಎಸ್ ಮುಖಂಡ ಬಾಲರಾಜ ಗುತ್ತೆದ್ದಾರ ಬೇಟಿ ನೀಡಿ ಧೈರ್ಯ ತುಂಬಿದ್ದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಮಾತನಾಡಿ ಒಂದು ವಾರದಲ್ಲೆ ತಂದೆ. ತಾಯಿ ಕಳೆದುಕೊಂಡಿದು ತುಂಬಾ ದುಖಃದ ಸಂಗಾತಿಯಾಗಿದೆ, ಮೃತರ ಮಗಳು ಈಗ ದ್ವಿತೀಯ ಪಿಯುಸಿ ಓದುತ್ತಿದ್ದಾರೆ , ಮುಂದಿನ ಶಿಕ್ಷಣ ಮುಗಿಯುವವರೆಗೂ ಎಷ್ಟು ಖರ್ಚಾದರು ನಾನು ಸಹಾಯ ಮಾಡಿ ಶಿಕ್ಷಣ ನೀಡುತ್ತೇನೆ.

Contact Your\'s Advertisement; 9902492681

ಮೃತರ ಮಗ ಡಿಪ್ಲೊಮಾ ಎಲೆಕ್ಟ್ರಾನಿಕ್ ಕಮ್ಯೂನಿಕೇಷನ್ಸ್ ಪದವಿ ಮುಗದಿದೆ, ಸ್ಥಳಿಯ ಸಿಮೆಂಟ್ ಕಂಪನಿಯಲ್ಲಿ ಉದ್ಯೋಗ ಕೊಡಸಲು ಪ್ರಯತ್ನ ಮಾಡುತ್ತೇನೆ ಹಾಗೂ ನಮ್ಮ ಸಂಸ್ಥೆಯಲ್ಲಿ ಅಥಾವ ರೆಸ್ಟೋರೆಂಟ್ ನಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ಇದೆ ಅಲ್ಲಿಯು ಕೆಲಸ ಮಾಡಬಹುದು, ಬೆಂಗಳೂರಿನಲ್ಲಿ ಸುಮಾರು ಐಟಿ ಕಂಪನಿಗಳು ನನಗೆ ಪರಿಚಯ ಇದೆ, ಬೆಂಗಳೂರಿನಲ್ಲಿ ಕೂಡ ಉದ್ಯೋಗ ನೀಡುವ ಭರವಸೆ ನೀಡಿದ್ದರು, ಮುಂದಿನ ದಿನಗಳಲ್ಲಿ ನಿಮ್ಮ ಕುಟುಂಬಕ್ಕೆ ಬೇಕಾಗುವ ಸಾಹಯ ಮಾಡುತ್ತೇನೆ, ಮುಂದಿನ ದಿನಗಳಲ್ಲಿ ಮೃತರ ಮಗಳ ಮದುವೆಗೆ ನನ್ನ ವೈಯಕ್ತಿಕ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು.

ಈ ಸಂದರ್ಭದಲ್ಲಿ ವಿಜಯಕುಮಾರ ಕುಲ್ಕರ್ಣಿ, ಪ್ರೋ ಮಲ್ಲಿಕಾರ್ಜುನ ಪಾಲಾಮೂರ, ಸಂತೋಷ ಕೇರೊಳಿ, ಅಬ್ದುಲ್ ಹಮೀದ, ಮಹ್ಮದ ಅಸ್ಲಾಮ್, ಸಂತೋಷ ಕುಮಾರ ಹಿರೇಮಠ, ಮುಸ್ತಾಫಾ ,ವಾರುಷ, ಗುರುಲಿಂಗ, ಫಕ್ರರೋದ್ದಿನ ಚಾಂಗಲೇರ, ಹಫಿಜ್ ಹೋಟಲ್ ಇತರರು ಇದ್ದರು.

ಮೃತರ ಮಗಳು ಈಗ ದ್ವಿತೀಯ ಪಿಯುಸಿ ಓದುತ್ತಿದ್ದಾರೆ , ಮುಂದಿನ ಶಿಕ್ಷಣ ಮುಗಿಯುವವರೆಗೂ ಎಷ್ಟು ಖರ್ಚಾದರು ನಾನು ಸಹಾಯ ಮಾಡಿ ಶಿಕ್ಷಣ ನೀಡುತ್ತೇನೆ. ಹಾಗೂ ಮದುವೆಗೂ ವಯಕ್ತಿಕ ಸಹಾಯ ಮಾಡುತ್ತೇನೆ.ಮೃತರ ಮಗ ಡಿಪ್ಲೊಮಾ ಎಲೆಕ್ಟ್ರಾನಿಕ್ ಕಮ್ಯೂನಿಕೇಷನ್ಸ್ ಪದವಿ ಮುಗಿಸಿದ್ದು , ಅವರಿಗೆ ಖಾಸಗಿ ಉದ್ಯೋಗ ಕೋಡಿಸುವ ಜವಾಬ್ದಾರಿ ನನ್ನದು. -ಬಾಲರಾಜ್ ಗುತ್ತೇದಾರ.ಜೆಡಿಎಸ್ ಮುಖಂಡರು ಸೇಡಂ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here