ಕಲಬುರಗಿ: ಹಿರಿಯ ಪತ್ರಕರ್ತ ದಿವಂಗತ ಜಯತೀರ್ಥ ಕಾಗಲ್ಕರ್ ಅವರ ಸ್ಮರಣಾರ್ಥ ನಿಮಿತ್ತ ಧರ್ಮ್ ಸಿಂಗ್ ಫೌಂಡೇಶನ್ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮುದ್ರಣ ಮತ್ತು ವಿದ್ಯುನ್ಮಾನ ಪತ್ರಕರ್ತರಿಗೆ ಆರೋಗ್ಯ ವಿಮೆ ನೀಡಲಾವುದು ಎಂದು ಶಾಸಕ ಡಾ. ಅಜಯಸಿಂಗ್ ತಿಳಿಸಿದರು.
ಅವರು ನಗರದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್ ಗಳಾದ ಪತ್ರಕರ್ತರಿಗೆ ಒಂದು ವರ್ಷದ ಮಟ್ಟಿಗೆ 2 ಲಕ್ಷದ ವಿಮೆ ಮತ್ತು ದಿವಂಗತ ಕಾಗಲ್ಕರ್ ಮಕ್ಕಳ ಶಿಕ್ಷಣ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಆರ್ ಪಾಟೀಲ್ ಮಾತನಾಡಿ ಜಯತೀರ್ಥ ಕಾಗಲ್ಕರ್ ಅವರ ಬಗ್ಗೆ ಹಳೆ ನೆನಪ್ಪುಗಳನ್ನು ಸ್ಮರಿಸಿ ಅವರ ವ್ಯಕ್ತಿತ್ವವದ ಬಗ್ಗೆ ಹೋಗಳುವ ಮೂಲಕ ಅವರ ಸೇವೆಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಶಾಸಕಿ ಕನೀಜ್ ಜಾತೀಮಾ, ಶಾಸಕ ಎಂ.ವೈ ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಪಕ್ಷದ ಜಿಲ್ಲಾ ಅಧ್ಯಕ್ಷ ಜಗದೇವ ಗುತ್ತೇದಾರ್,ಮಾಜಿ ಸಚಿವ ಶರಣ ಪ್ರಕಾಶ ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್, ಸುಭಾಷ್ ರಾಠೋಡ್ ಸೇರಿದಂತೆ ಇತರರು ಇದ್ದರು.