ಸೇಡಂ: ಕೋವಿಡ ಎರಡನೆ ಅಲೆಯ ಸಂಕಷ್ಟದಲ್ಲಿ ಸಿಲುಕಿರುವ ಬಡ ಜನ ಒಂದು ಹೋತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದು ಇಂತಹ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡ ಬಾಲರಾಜ್ ಗುತ್ತೇದಾರ ಅವರು ಬಡ ಜನರ ನೇರವಿಗೆ ನೀತಿರುವುದು ಶಾಘ್ಲನೀಯ ವಾಗಿದೆ ಎಂದು ಬಹುಭಾಷ ಖ್ಯಾತ ನಟಿ ಹರ್ಷಿತಾ ಪೂಣಚ್ಚ ಹೇಳಿದರು.
ಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿ ಬೆಂಗಳೂರಿನ ಭುವನಂ ಫೌಂಡೆಷನ್ ಹಾಗೂ ಬಾಲರಾಜ್ ಬಿ ಗ್ರೇಡ್ ವತಿಯಿಂದ ಒಂದು ತಿಂಗಳದ ಆಹಾರ ಧಾನ್ಯಗಳ ಕಿಟ್ಗಳನ್ನು ವಿತರಿಸಿ ಮಾತನಾಡಿದ ಅವರು ಕೋವಿಡ ಮಾರ್ಗಸೂಚಿಯನ್ನು ಅನುಸರಿಸುವ ಮೂಲಕ ಮಹಾಮಾರಿ ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಿದ್ದು, ತಮ್ಮ ಆರೋಗ್ಯ ಮತ್ತು ಜೀವದ ರಕ್ಷಣೆ ತಮ್ಮ ಕೈಯಲ್ಲಿದೆ ಎಂದು ಕೋರೊನಾ ಸೋಂಕಿನ ಕುರಿತು ಜನರಿಗೆ ಜಾಗೃತಿ ಮೂಡಿಸಿದರು.
ನಂತರ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಮಾತನಾಡಿ ಕೋವಿಡ ಲಾಕ್ಡೌನ್ ಪರಿಣಾಮದಿಂದ ಸಾಕಷ್ಟು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಸೇಡಂ ಮತಕ್ಷೇತ್ರದ ಮುಧೋಳ ಗ್ರಾಮದ ಬಡಜನರ ಸೇವೆ ಮಾಡಲುದೂರದ ಬೆಂಗಳೂರಿನಿಂದ ಬಂದ ಭುವನಂ ಫೌಂಡೆಷನ್ ತಂಡ ಇಲ್ಲಿ ಆಹಾರ ಧಾನ್ಯಗಳನ ಕಿಟ್ಗಳನ್ನು ವಿತರಿಸುವ ಮೂಲಕ ಮಾನವೀಯ ಸೇವೆ ಕೈಗೊಂಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಟ ಭುವನ, ಸೇಡಂ ಪುರಸಭೆ ಮಾಜಿ ಅಧ್ಯಕ್ಷ ಯಕ್ಬಾಲ್ ಖಾನ್ .ಜೆಡಿಎಸ್ ತಾಲೂಕು ಅಧ್ಯಕ್ಷ ಜಗನ್ನಾಥರೆಡ್ಡಿ ಗೋಟೂರ. ವಿಜಯಕುಮಾರ ಕುಲಕರ್ಣಿ. ಸಂತೋಷ ಕೇರೋಳ್ಳಿ. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕರೋನಾ ಸಂಕಷ್ಟದ ಸಮಯದಲ್ಲಿ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಸೇಡಂ ಮತಕ್ಷೇತ್ರದ ಜನರಿಗೆ ಉಚಿತ 2 ಆಂಬ್ಯುಲೆನ್ಸ್ ಸೇವೆ ,150 ಗ್ರಾಮಗಳಲ್ಲಿ ಸ್ಯಾನಿಟೈಸರ್ ಸಿಂಪರಣೆ, 50 ಸಾವಿರಕ್ಕೂ ಅಧಿಕ ಆಹಾರ ಪದಾರ್ಥದ ಕಿಟ್ ವಿತರಿಣೆ ಸೇರಿದಂತೆ ವಿವಿಧ ರೀತಿಯಿಂದ ಜನ ಸೇವೆ ಮಾಡುತಿರುವುದು ಶಾಘ್ಲನೀಯ. – ಭುವನ, ನಟ ಬೆಂಗಳೂರು.