ವಿಧಾನಸೌಧದ ಆವರಣದಲ್ಲಿ ಜಗಜ್ಯೋತಿ ಬಸವೇಶ್ವರರ ಪುತ್ಥಳಿ: ಬಿಎಸವೈ ಗೆ ಬಡಾ ಅಭಿನಂದನೆ

0
179

ಕಲಬುರಗಿ : ಜಗತ್ತಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಸಾರಿದ, ಅನುಭವ ಮಂಟಪ ಸ್ಥಾಪಕ, ಸಕಲ ಜೀವಾತ್ಮರಿಗೆ ಹಿತ ಬಯಸಿದ ಮತ್ತು ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ ಜಗಜ್ಯೋತಿ ವಿಶ್ವಗುರು ಬಸವಣ್ಣನವರ ಪುತ್ಥಳಿಯನ್ನು ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಆವರಣದಲ್ಲಿ ಪ್ರತಿಷ್ಟಾಪಿಸಲು ನಿರ್ಧರಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರಿಗೆ ಬಿಜೆಪಿ ಯುವ ಮೊರ್ಚಾದ ಜಿಲ್ಲಾ ಕಾರ್ಯದರ್ಶಿ ರೇವಣಸಿದ್ದ ಬಡಾ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

ಬಸವಣ್ಣನವರ ಜೀವನ ಸಮಾನತೆಯ ಸಂಕೇತ ಅವರ ಆದರ್ಶಗಳೆ ನಮಗೆ ದಾರಿದೀಪವಾಗಿವೆ. ಸಂವಿಧಾನ ಶಿಲ್ಪಿ, ಸಮಾನತೆಗಾಗಿ ಹೋರಾಡಿದ ಡಾ. ಬಾಬಾ ಸಾಹೇಬ ಆಂಬೇಡ್ಕರ್ ರವರ ಹಾಗೂ ವಿಶ್ವ ಗುರು ಬಸವಣ್ಣ ನವರ ಪುತ್ಥಳಿ ಒಂದೇ ಕಡೆ ಇರುವುದು ಆ ಮಹಾನುಭಾವರಿಗೆ ರಾಜ್ಯ ಸರ್ಕಾರ ಸಲ್ಲಿಸುವ ಗೌರವವಾಗಿದೆ ಎಂದು ರೇವಣಸಿದ್ದ ಬಡಾ ಅಭಿಪ್ರಾಯ ಪಟ್ಟಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here