ಸುರಪುರ: ಪ್ರತಿಯೊಬ್ಬರು ತಪ್ಪದೆ ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳುವ ಮೂಲಕ ಕೊರೊನಾ ಸೊಂಕಿನಿಂದ ದೂರವಿರುವಂತೆ ತಾಲೂಕು ಪಂಚಾಯತಿ ಇಒ ಅಂಬ್ರೇಶ ಕರೆ ನೀಡಿದರು.
ತಾಲೂಕಿನ ಕೋನಾಳ ಗ್ರಾಮದಲ್ಲಿ ನಡೆದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಡೆದ ಹೊಲದಲ್ಲಿನ ಲ್ಯಾಟರಲ್ ಕಾಲುವೆಗಳ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ಮಾತನಾಡಿ, ತುಂಬಾ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿರುವಿರಿ ತುಂಬಾ ಸಂತೋಷದ ಸಂಗತಿಯಾಗಿದೆ.ಅಲ್ಲದೆ ತಾವೆಲ್ಲರು ತುಂಬಾ ಉತ್ಸಾಹದಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸದಲ್ಲಿ ತೊಡಗಿರುವುದು ಸಂತೋಷದ ಸಂಗತಿ ಇದೇರೀತಿಯಾಗಿ ತಾವೆಲ್ಲರು ಕೂಡ ಕೊರೊನಾ ಲಸಿಕೆಯನ್ನು ಪಡೆದುಕೊಳ್ಳಿ,ಅಲ್ಲದೆ ೧೮ ವರ್ಷ ಮೇಲ್ಪಟ್ಟ ತಮ್ಮ ಮನೆಯ ಎಲ್ಲರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ೨೦೦ ಜನ ಕೂಲಿಕಾರರು ಕಾರ್ಯನಿರ್ವಹಿಸುತ್ತಿದ್ದರು ಎಲ್ಲರು ಕೂಡ ಲಸಿಕೆ ಪಡೆಯುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ,ಪಂಚಾಯತಿ ಅಭೀವೃಧ್ಧಿ ಅಧಿಕಾರಿ ವೆಂಕೋಬ ಬಾಕ್ಲಿ,ಜೆಇ ಅರವಿಂದ್, ಕಾರ್ಮಿಕರ ಮೇಲ್ವಿಚಾರಕರಾದ ಶೇಖಪ್ಪ ಭಂಡಾರಿ ಗುರುನಾಥರಡ್ಡಿ ಪಾಟೀಲ್ ಸೇರಿದಂತೆ ಎಲ್ಲಾ ಕೂಲಿ ಕಾರ್ಮಿಕರಿದ್ದರು.