ಸುರಪುರ: ಯಾದಗಿರಿ ಜಿಲ್ಲಾ ನೂತನ ಅಪರ ಜಿಲ್ಲಾಧಿಕಾರಿಗಳಾಗಿ ನೇಮಕಗೊಂಡ ಅಧಿಕಾರಿ ಶಂಕರಗೌಡ ಸೋಮನಾಳ ಅವರಿಗೆ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ವತಿಯಿಂದ ಸನ್ಮಾನಿಸಿ ಅಭಿನಂಧಿಸಲಾಯಿತು.
ಯಾದಗಿರಿಯ ಜಿಲ್ಲಾಡಳಿತರ ಭವನದ ಅಪರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಂಕರಗೌಡ ಸೋಮನಾಳ ಅವರನ್ನು ಭೇಟಿ ಮಾಡಿದ ಕೆಜೆಯು ಅನೇಕ ಮುಖಂಡರು,ಅಪರ ಜಿಲ್ಲಾಧಿಕಾರಿಗಳಿಗೆ ಶಾಲು ಹೊದಿಸಿ ಹೂಮಾಲೆ ಹಾಕಿ ಸನ್ಮಾನಿಸಿ ಕರ್ತವ್ಯಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೆಜೆಯು ಜಿಲ್ಲಾಧ್ಯಕ್ಷ ಡಿ.ಸಿ.ಪಾಟೀಲ್,ರಾಜ್ಯ ವಿಭಾಗೀಯ ಉಪಾಧ್ಯಕ್ಷ ವೀರಣ್ಣ ಕಲಕೇರಿ,ರಾಜ್ಯ ಸಮಿತಿ ಸದಸ್ಯ ಪವನ ಕುಲಕರ್ಣಿ,ಸುರಪುರ ತಾಲೂಕು ಅಧ್ಯಕ್ಷ ರಾಜು ಕುಂಬಾರ,ಉಪಾಧ್ಯಕ್ಷರಾದ ರವಿರಾಜ ಕಂದಳ್ಳಿ, ಮಲ್ಲು ಗುಳಗಿ,ಪ್ರಧಾನ ಕಾರ್ಯದರ್ಶಿ ಪರಶುರಾಮ ಮಲ್ಲಿಬಾವಿ,ಖಜಾಂಚಿ ಮಹಾದೇವಪ್ಪ ಬೊಮ್ಮನಹಳ್ಳಿ ಪತ್ರಕರ್ತರಾದ ಮನಮೋಹನ ದೇವಾಪುರ,ರೇವಣಸಿದ್ದಯ್ಯ ಮಠ ಕೆಂಭಾವಿ, ಶ್ರೀಮಂತ ಚಲುವಾದಿ ಹಾಗು ಗಿರಿ ವಾಣಿ ಪತ್ರಿಕೆ ಸಂಪಾದಕ ಕ್ರಿಸ್ಟೋಪರ್ ಸೇರಿದಂತೆ ಅನೇಕರಿದ್ದರು.