ಜಿಲ್ಲಾ ಪಂಚಾಯತಿ ಪರ ವಕೀಲರಾಗಿ ಶಿವಾನಂದ ಎ ಆವಟಿ ನೇಮಕ

0
195

ಸುರಪುರ: ಜಿಲ್ಲಾ ಪಂಚಾಯತಿ ಯಾದಗಿರಿ ಪರವಾಗಿ ನ್ಯಾಯಾಲಯದಲ್ಲಿ ವಾದಿಸಲು ನಗರದ ಖ್ಯಾತ ವಕೀಲ ಶಿವಾನಂದ ಎ ಆವಟಿಯವರನ್ನು ನೇಮಕಗೊಳಿಸಲಾಗಿದೆ.

ಈ ಕುರಿತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಘೋಷಣೆಯನ್ನು ಹೊರಡಿಸಿದ್ದು,ಸುರಪುರ,ಹುಣಸಗಿ ಮತ್ತು ಶಹಾಪುರ ತಾಲೂಕು ಪಂಚಾಯತಿಗಳ ಪರವಾಗಿ ಹಾಗು ಈ ಮೂರು ತಾಲೂಕಿನ ಅಧೀನದ ಗ್ರಾಮ ಪಂಚಾಯತಿಗಳ ಪರವಾಗಿ ಮತ್ತು ಜಿಲ್ಲಾ ಪಂಚಾಯತಿ ಪರವಾಗಿ ನ್ಯಾಯಾಲಯದಲ್ಲಿ ದಾಖಲಾಗುವ ರಿಟ್ ಅರ್ಜಿ,ದಾವೆ ಮತ್ತು ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ವಾದಿಸಲು ಜಿಲ್ಲಾ ಪಂಚಾಯತಿ ಯಾದಗಿರಿ ಕಾರ್ಯಾಲಯದ ವಕೀಲರ ತಂಡಕ್ಕೆ ನೇಮಿಸಿಕೊಳ್ಳಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹೊರಡಿಸಿರುವ ಜ್ಞಾಪನಾ ಪತ್ರದಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here