ಕೊರೊನಾಗೆ ತಂದೆ, ತಾಯಿ ಕಳೆದುಕೊಂಡ ಮಕ್ಕಳಿಗೆ ಭಾಯಿ ಭಾಯಿ ಗುರುಪ್ 1.21 ರೂ. ಪರಿಹಾರ ಚೆಕ್ ವಿತರಣೆ

0
29

ಕಲಬುರಗಿ: ಕೊರೊನಾಗೆ ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡ ವಾಡಿ ಪಟ್ಟಣದ ವಾರ್ಡ್ ಸಂಖ್ಯೆ 7ರ ಬಿರ್ಲಾ ಬಡಾವಣೆಯ ಅಹ್ಮದ್ ಪಾಶಾ, ರುಕ್ಸಾನಾ ಬೇಗಂ ಅವರ ಮೂವರು ಮಕ್ಕಳಿಗೆ ಭಾಯಿ ಭಾಯಿ ಗುರುಪ್ ಮತ್ತು ಟೀಂ ಪ್ರಿಯಾಂಕ್ ಖರ್ಗೆ ಸಹಯೋಗದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಅವರು ಪರಿಹಾರ ಚೆಕ್ ನೀಡಿದರು.

ಕಳೆದ ಮೇ 20 ಕ್ಕೆ ರುಕ್ಸಾನಾ ಬೇಗಂ ಮತ್ತು ಇತ್ತೀಚೆಗೆ ಜೂನ್ 6 ರಂದು ಅಹ್ಮದ್ ಪಾಶಾ ಕೊರೊನಾಗೆ ಬಲಿಯಾಗಿದರು.

Contact Your\'s Advertisement; 9902492681

ಇಬ್ಬರು ದಂಪತಿಗಳಿಗೆ ಮೂವರು ಮಕ್ಕಳಿದ್ದು, ಪದವಿ ಓದುತ್ತಿರುವ ನೇಹಾ ಬಾನು, ಸಬಾ ಬಾನು ಮತ್ತು 10ನೇ ಓದುತ್ತಿರುವ ಸಮದ್ ಪಾಶಾ ತನ್ನ ತಾಯಿ ಮತ್ತು ತಂದೆಯನ್ನು ಕಳೆದುಕೊಂಡ ಅನಾಥ ಮಕ್ಕಳಾಗಿದ್ದಾರೆ.

ಕುಟುಂಬ ಕಳೆದುಕೊಂಡು ಅನಾಥವಾದ ಈ ಮಕ್ಕಳ ಕುಟುಂಬಕ್ಕೆ ನೆರವು ಆಗುವ ನಿಟ್ಟಿನಲ್ಲಿ ಭಾಯಿ ಭಾಯಿ ಅಧ್ಯಕ್ಷರಾ ಗುರುಪ್ ಅಧ್ಯಕ್ಷರಾದ ಮೊಹಮ್ಮದ್ ಇರ್ಫಾನ್, ಟೀಂ ಪ್ರಿಯಾಂಕ್ ಖರ್ಗೆ ಅಧ್ಯಕ್ಷರಾದ ಶಮಶೀರ್ ಅಹ್ಮದ್ ನೇತೃತ್ವದಲ್ಲಿ ಕ್ಷೇತ್ರದ ಶಾಸಕರಾದ ಪ್ರಿಯಾಂಕ್ ಖರ್ಗೆಗೆ ಮೂಲಕ 1 ಲಕ್ಷ 21 ಸಾವಿರ ರೂ. ಪರಿಹಾರ ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಬಡಾವಣೆಯ ನಿವಾಸಿಗಳು ಸೇರಿದಂತೆ ಕಾಂಗ್ರೆಸ್ ಕಾರ್ಯಾಕರ್ತರು ಮತ್ತು ಮುಖಂಡರು ಜೊತೆಗೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here